Tuesday, April 14, 2026
Tuesday, April 14, 2026

ಡಾ.ಎನ್.ಎಸ್.ಎ.ಎಮ್ ಪ್ರಥಮ ದರ್ಜೆ ಕಾಲೇಜು : ‘ರಾಗ್ನಾರಾಕ್ ಎನ್ ಇಗ್ಮಾ 2026’ ಅಂತರ್ ಕಾಲೇಜು ಸಾಂಸ್ಕೃತಿಕ ಸ್ಪರ್ಧೆ

ಡಾ.ಎನ್.ಎಸ್.ಎ.ಎಮ್ ಪ್ರಥಮ ದರ್ಜೆ ಕಾಲೇಜು : ‘ರಾಗ್ನಾರಾಕ್ ಎನ್ ಇಗ್ಮಾ 2026’ ಅಂತರ್ ಕಾಲೇಜು ಸಾಂಸ್ಕೃತಿಕ ಸ್ಪರ್ಧೆ

Date:

ನಿಟ್ಟೆ, ಫೆ.26: ಫೆ. 25 ರ ಬುಧವಾರದಂದು ನಿಟ್ಟೆ ಶಂಕರ ಅಡ್ಯಂತಾಯ ಸ್ಮಾರಕ ಪ್ರಥಮ ದರ್ಜೆ ಕಾಲೇಜು, ನಿಟ್ಟೆಯ ಸದಾನಂದ ಸಭಾಂಗಣದಲ್ಲಿ ರಾಜ್ಯಮಟ್ಟದ ‘ರಾಗ್ನಾರಾಕ್ ಎನ್ ಇಗ್ಮಾ 2026’ ಅಂತರ್ ಕಾಲೇಜು ಸಾಂಸ್ಕೃತಿಕ ಸ್ಪರ್ಧೆಯನ್ನು ಕಾರ್ಕಳ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ವಿ. ಸುನಿಲ್ ಕುಮಾರ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಉತ್ಕೃಷ್ಟವಾದ ಪೈಪೋಟಿ ಮತ್ತು ತಂತ್ರಜ್ಞಾನದ ವಿಕಾಸದ ಕಾಲಗಟ್ಟದಲ್ಲಿ ನಾವಿದ್ದು ಕಲಿಕೆ ಮತ್ತು ವಿಚಾರಗಳಲ್ಲಿ ಹೊಸತನವನ್ನು ಕಂಡುಕೊಂಡಾಗ ಮಾತ್ರ ಯಶಸ್ಸು ಸಾಧ್ಯವಾಗುತ್ತದೆ, ಇಂತಹ ಸ್ಪರ್ಧೆಗಳು ವಿದ್ಯಾರ್ಥಿಗಳಿಗೆ ಹೊಸತನದ ಯೋಚನೆಗಳಿಗೆ ಸ್ಪೂರ್ತಿಯನ್ನು ತುಂಬುತ್ತವೆ, ವಿದ್ಯಾರ್ಥಿಗಳು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು. ಅಪಾರ ಯುವಶಕ್ತಿಯನ್ನು ಹೊಂದಿರುವ ನಮ್ಮ ದೇಶ ಅದರ ಸದ್ಭಳಕೆಯಿಂದ ಅಭಿವೃದ್ಧಿಯನ್ನು ಸಾಧಿಸುತ್ತದೆ ಅದಕ್ಕೆ ಯುವಜನತೆ ಕೈ ಜೋಡಿಸಬೇಕು ಎಂದರು.

ಕಾರ್ಯಕ್ರಮದ ಗೌರವ ಅತಿಥಿಯಾಗಿ ಭಾಗವಹಿಸಿದ್ದ ವಿಫ್ಲಿ ಇಂಡಿಯಾ ಕಾರ್ಯನಿರ್ವಾಹಕ ಮುಖ್ಯಸ್ಥ ಸುಮಂತ್ ಪಡಿವಾಳ್ ಮಾತನಾಡಿ ವಿದ್ಯಾರ್ಥಿಗಳು ಕಲಿಕೆಯನ್ನು ಅಕಾಡೆಮಿಕ್ ಕಲಿಕೆಗೆ ಸೀಮಿತಗೊಳಿಸಕೊಳ್ಳಬಾರದು, ಆಧುನಿಕ ಕಂಪೆನಿಗಳು ನೌಕರರಲ್ಲಿ ಅಂಕಗಳ ಜೊತೆಗೆ ತಂಡವಾಗಿ ಕೆಲಸ ನಿರ್ವಹಿಸುವ ಕೌಶಲ್ಯತೆ, ಸಂವಹನ ಹಾಗೂ ಕುತೂಹಲ ಭರಿತ ಯುವಜನೆತೆಯನ್ನು ಅಪೇಕ್ಷಿಸುತ್ತಿದೆ, ಇಂತಹ ಮನಸ್ಥಿತಿಯನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಲು ಈ ರೀತಿಯ ಸ್ಪರ್ಧೆಗಳು ಅವಕಾಶ ನೀಡುತ್ತವೆ ಅದನ್ನು ಸದುಪಯೋಗ ಪಡಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಅಫ್ ಕ್ಯಾಂಪಸ್ ನ ನಿರ್ವಹಣೆ ಮತ್ತು ಅಭಿವೃದ್ಧಿ ವಿಭಾಗದ ನಿರ್ದೇಶಕ ಯೋಗಿಶ್ ಹೆಗ್ಡೆ ಮಾತನಾಡಿ, ಈ ರೀತಿ ಅಂತರ್ ಕಾಲೇಜು ಸ್ಪರ್ಧೆಗಳ ಆಯೋಜನೆ ಮತ್ತು ಭಾಗವಿಸುವಿಕೆ ನಮ್ಮೊಳಗಿನ ವಿಭಿನ್ನ ಸಾಮರ್ಥವನ್ನು ಕಂಡುಕೊಳ್ಳಲು ಇರುವ ಅವಕಾಶವಾಗಿದ್ದು ವಿದ್ಯಾರ್ಥಿಗಳೊಳಗಿನ ಕೌಶಲ್ಯವನ್ನು ಹೆಚ್ಚಿಸಲು ಸಹಕಾರಿಯಾಗುತ್ತದೆ, ಹಾಗಾಗಿ ಅವಕಾಶಗಳು ಸಿಕ್ಕಾಗ ಬಳಸಿಕೊಳ್ಳಿ ಎಂದರು.

ಕಾಲೇಜಿನ ಪ್ರಾಂಶುಪಾಲೆ ಡಾ.ವೀಣಾ ಕುಮಾರಿ ಬಿ.ಕೆ. ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ವಿದ್ಯಾರ್ಥಿ ಪರಿಷತ್ ಸಂಯೋಜಕಿ ರೇಖಾ ವಂದಿಸಿದರು. ವಿದ್ಯಾರ್ಥಿ ಪರಿಷತ್ ಕಾರ್ಯದರ್ಶಿ ಶ್ರೀವತ್ಸ.ವಿ. ಸ್ಪರ್ಧೆಯ ರೂಪುರೇಷಗಳನ್ನು ವಿವರಿಸದರು. ವೇದಿಕೆಯಲ್ಲಿ ವಿದ್ಯಾರ್ಥಿ ಪರಿಷತ್ ಸಂಯೋಜಕಿ ಮಾಲಿನಿ ಜೆ.ರಾವ್ ಹಾಗೂ ಐಕ್ಯೂಎಸಿ ಸಂಯೋಜಕರ ಪ್ರಕಾಶ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ನಿಭಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮುದ್ದಣ್ಣನಗರ: ಸ್ವಚ್ಛತಾ ಅಭಿಯಾನ

ಕಾರ್ಕಳ, ಏ.14: ಶ್ರೀ ಧರ್ಮರಸು ಕೊಡಮನಣಿತ್ತಾಯಿ ಕುಕ್ಕಿನಂತಾಯ ದೈವಸ್ಥಾನ ಬ್ರಹ್ಮ ಬೈದರ್ಕಳ...

ಮಧ್ಯಪ್ರವೇಶಿಸಬೇಡಿ: ಹಾರ್ಮುಜ್ ದಿಗ್ಬಂಧನದ ಬಗ್ಗೆ ಅಮೆರಿಕಾಗೆ ಚೀನಾ ಎಚ್ಚರಿಕೆ

ಯು.ಬಿ.ಎನ್.ಡಿ., ಏ.14: ಚೀನಾದ ಹಿರಿಯ ಅಧಿಕಾರಿಯೊಬ್ಬರು ಹಾರ್ಮುಜ್ ಜಲಸಂಧಿಯ ಮೇಲೆ ದಿಗ್ಬಂಧನ...

ಬಾಳೆಬರೆ ಘಾಟಿಯಲ್ಲಿ ವಾಹನ ಸಂಚಾರ ನಿಷೇಧ

ಉಡುಪಿ, ಏ.14: ಬಾಳೆಬರೇ ರಾಜ್ಯ ಹೆದ್ದಾರಿ 52 ರ ಬಾಳೆಬರೆ ಘಾಟಿಯಲ್ಲಿ...
error: Content is protected !!