ಉಡುಪಿ, ನ.21: ಹಿಂದೂ ಸನಾತನ ಧರ್ಮ ಬಹಳ ಶ್ರೇಷ್ಠ ಧರ್ಮ. ಎಲ್ಲಾ ಧರ್ಮಗಳಂತೆ ಒಳ್ಳೆಯದನ್ನೇ ಹೇಳಿದೆ. ನಾವೆಲ್ಲರೂ ಒಳ್ಳೆಯದನ್ನು ಮಾತ್ರ ಪಾಲಿಸಬೇಕು. ಎಲ್ಲಾ ಧರ್ಮಗಳನ್ನು ಪ್ರೀತಿಸಬೇಕು, ಗೌರವಿಸಬೇಕು ಎಂದು ಜೈನ ಮುನಿ ಮೂಡಬಿದ್ರೆಯ ಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು.
ಉಡುಪಿಯ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕರಾದ ವಿಶ್ವನಾಥ್ ಶೆಣೈ ಅವರು ಉಡುಪಿಯ ತೆಂಕಪೇಟೆಯಲ್ಲಿ ಆಯೋಜಿಸಿದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು. ಸಮಾಜ ಸೇವೆ ಸಲ್ಲಿಸಿದ ಶ್ರೀನಿವಾಸ ಕಾಮತ್, ಜನಾರ್ಧನ್ ಮತ್ತು ಉಮೇಶ್ ಅವರನ್ನು ಸ್ವಾಮೀಜಿಯವರು ಗೌರವಿಸಿದರು.
ರಾಜ್ಯ ಮತ್ತು ಜಿಲ್ಲಾ ಪತ್ರಕರ್ತರ ಸಂಘಟನೆಗೆ ಆಯ್ಕೆಯಾದ ಆಸ್ಟ್ರೋ ಮೋಹನ್, ಜನಾರ್ಧನ ಕೊಡವೂರು, ಮೋಹನ್ ಹಂದಾಡಿ ಅವರನ್ನು ಸ್ವಾಮೀಜಿಯವರು ಗೌರವಿಸಿದರು. ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಳಿ ಕಡೆಕಾರ್ ನಿರೂಪಿಸಿದರು. ರವಿರಾಜ್ ಹೆಚ್.ಪಿ. ವಂದಿಸಿದರು.




By
ForthFocus™