ಉಡುಪಿ, ನ.13: ಕಾಪು ವಿಧಾನಸಭಾ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನವೆಂಬರ್ 18 ರಂದು ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.00 ಗಂಟೆಯವರೆಗೆ ಜನಸ್ಪಂದನಾ ಕಾರ್ಯಕ್ರಮ ನಡೆಯಲಿದ್ದು ಕಾಪು ವಿಧಾನಸಭಾ ಕ್ಷೇತ್ರದ ಬೊಮ್ಮರಬೆಟ್ಟು, ಅಂಜಾರು, ಆತ್ರಾಡಿ, ಹಿರೇಬೆಟ್ಟು, 82ಕುದಿ, ಪೆರ್ಣಂಕಿಲ, ಮರ್ಣೆ, ಮಣಿಪುರ, ಪೆರ್ಡೂರು, ಬೈರಂಪಳ್ಳಿ, 41 ಶೀರೂರು, ಬೆಳ್ಳರಪಾಡಿ, ಕುಕ್ಕೆಹಳ್ಳಿ, ಬೆಳ್ಳಂಪಳ್ಳಿ, ಉದ್ಯಾವರ, ಕೊರಂಗ್ರಪಾಡಿ, 80ಬಡಗಬೆಟ್ಟು, ಅಲೆವೂರು ವ್ಯಾಪ್ತಿಯಲ್ಲಿರುವವರು ಸರಕಾರದ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಯಾವುದೇ ಅಹವಾಲುಗಳಿದ್ದಲ್ಲಿ ಅರ್ಜಿ ನೀಡಿ ಪರಿಹಾರ ಕಂಡುಕೊಳ್ಳುವಂತೆ ಉಡುಪಿ ತಹಶೀಲ್ದಾರರ ಕಚೇರಿ ಪ್ರಕಟಣೆ ತಿಳಿಸಿದೆ.
ಜನಸ್ಪಂದನಾ ಕಾರ್ಯಕ್ರಮ
ಜನಸ್ಪಂದನಾ ಕಾರ್ಯಕ್ರಮ
Date:




By
ForthFocus™