Tuesday, July 28, 2026
Tuesday, July 28, 2026

ಕಲ್ಯಾಣಪುರ: ‘ಲಿಂಗಮುದ್ರೆ-ಗಡಿಕಲ್ಲು’ಪತ್ತೆ

ಕಲ್ಯಾಣಪುರ: ‘ಲಿಂಗಮುದ್ರೆ-ಗಡಿಕಲ್ಲು’ಪತ್ತೆ

Date:

ಉಡುಪಿ, ಅ.7: ಕಲ್ಯಾಣಪುರ ಗ್ರಾ. ಪಂ. ವ್ಯಾಪ್ತಿಯ ‘ಪಕ್ಕಿಬೆಟ್ಟು-ಗರೋಡಿಗೆ’ ಹೋಗುವ ದಾರಿಯಲ್ಲಿ ‘ಬಬ್ಬುಸ್ವಾಮಿ ದೈವದ ಗುಡಿ ಬಳಿ ಶಿಲೆಯೊಂದು ದೊರೆತಿದ್ದು ಸೂರ್ಯ -ಚಂದ್ರ, ಉಬ್ಬುಶಿಲ್ಪದ ಲಿಂಗಮುದ್ರೆ ಕಲ್ಲು ಪತ್ತೆಯಾಗಿದೆ.

ಸಮಾಜ ಸೇವಕರಾದ ಅಪ್ಪು ಟೈಲರ್ ಹಾಗೂ ಅವಿನಾಶ್ ಪಕ್ಕಿಬೆಟ್ಟು ಇವರು ಉಡುಪಿಯ ಪ್ರಾಚ್ಯ ಸಂಚಯ ಸಂಶೋಧನಾ ಕೇಂದ್ರದ ನಿರ್ದೇಶಕ ಪ್ರೊ.. ಎಸ್. ಎ. ಕೃಷ್ಣಯ್ಯ ಹಾಗೂ ಹವ್ಯಾಸಿ ಇತಿಹಾಸ ಸಂಶೋಧಕ ಸದಸ್ಯ, ಉಡುಪಿ, ಕಡಿಯಾಳಿಯ ಯು. ಕ. ಬಾಯ್ ಪ್ರೌ. ಶಾ. ನಿವೃತ್ತ ಅಧ್ಯಾಪಕ ಕೆ. ಶ್ರೀಧರ ಭಟ್, ಕಲ್ಯಾಣಪುರ ಇವರಿಗೆ ಮಾಹಿತಿಗಳನ್ನು ನೀಡಿ ಸಹಕರಿಸಿದ್ದಾರೆ. ‘ಮೇಲ್ನೋಟಕ್ಕೆ ಇದು 17ನೇ ಶತಮಾನದ ಕೆಳದಿ ಕಾಲದೆಂದು ಕಂಡುಬಂದರೂ ನಿಖರತೆಗಾಗಿ ಹೆಚ್ಚಿನ ಅಧ್ಯಯನವನ್ನು ಕೈಗೊಳ್ಳಲಾಗುವುದು. ಇಂತಹ ಅವಶೇಷಗಳು, ಪುರಾತತ್ವ ಮಾಹಿತಿಗಳು ದೊರಕಿದಲ್ಲಿ ಇತಿಹಾಸ ಸಂಶೋಧಕರಿಗೆ ಪೂರಕ ಮಾಹಿತಿಗಳನ್ನು ಒದಗಿಸುವುದರ ಮೂಲಕ ಸಹಕರಿಸಬೇಕೆಂದು ಶ್ರೀಧರ್ ಭಟ್ ಹೇಳಿದ್ದಾರೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ನರೇಂದ್ರ ಎಸ್ ಗಂಗೊಳ್ಳಿಗೆ ಕಾವ್ಯಶ್ರೀ ಪ್ರಶಸ್ತಿ

ಗಂಗೊಳ್ಳಿ, ಜು.27: ಕರ್ನಾಟಕ ರಾಜ್ಯ ಬರಹಗಾರರ ಸಂಘ(ರಿ) ಹೂವಿನಹಡಗಲಿ ವತಿಯಿಂದ ಕೊಡಲ್ಪಡುವ...

ಕಾಮನ್‌ವೆಲ್ತ್ ಕ್ರೀಡಾಕೂಟ: ಮುಂದುವರಿದ ಭಾರತದ ಪದಕ ಬೇಟೆ

ಯು.ಬಿ.ಎನ್.ಡಿ., ಜು.27: ಗ್ಲಾಸ್ಗೋದಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ವೇಟ್‌ಲಿಫ್ಟರ್ ಜ್ಞಾನೇಶ್ವರಿ...

ಸಂಸ್ಕೃತ ಪ್ರತಿಭಾ ಪುರಸ್ಕಾರ

ಉಡುಪಿ, ಜು.27: ಉಡುಪಿ ಶ್ರೀ ಕೃಷ್ಣಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಶೀರೂರು...
error: Content is protected !!