ಉಡುಪಿ, ಜು.14: ಶ್ರೀ ಪೇಜಾವರ ಹಾಗೂ ಶ್ರೀ ಶೀರೂರು ಶ್ರೀಪಾದರು ಸೋಮವಾರ ತಮ್ಮ ಚಾತುರ್ಮಾಸ್ಯದ ಅಂಗವಾಗಿ ನಡೆದ ಶೋಭಾಯಾತ್ರೆ ಮುನ್ನ ಪರ್ಯಾಯ ಶ್ರೀಪಾದರ ಅಪೇಕ್ಷೆಯಂತೆ ಬೆಂಗಳೂರು ಶ್ರೀ ಪುತ್ತಿಗೆ ಮಠಕ್ಕೆ ಚಿತ್ತೈಸಿ ಶ್ರೀ ಗೋವರ್ಧನಧಾರಿ ಕೃಷ್ಣ ದೇವರ ದರ್ಶನ ಪಡೆದುಕೊಂಡರು.
ಶ್ರೀ ಮಠದಿಂದ ವಿಶೇಷ ಗೌರವಾದರಗಳನ್ನು ಉಭಯ ಶ್ರೀಪಾದಂಗಳರವರಿಗೆ ಮಾಡಲಾಯಿತು.
ಶ್ರೀಗಳು ಗೋವರ್ಧನಧಾರಿ ವಿದ್ಯಾಪೀಠದ ಮಕ್ಕಳಿಗೆ ಮತ್ತು ನೆರೆದ ಭಕ್ತ ವೃಂದಕ್ಜೆ ಆಶೀರ್ವಚನವನ್ನು ನೀಡಿದರು. ಶ್ರೀಪಾದರ ಕಾರ್ಯದರ್ಶಿ ಪ್ರಸನ್ನಚಾರ್ಯ ಹಾಗೂ ಶ್ರೀ ಮಠದ ವ್ಯವಸ್ಥಾಪಕ ಎ ಬಿ ಕುಂಜಾರ ಗೌರವಾರ್ಪಣೆಯನ್ನು ಸಲ್ಲಿಸಿದರು. ಅಪೂರ್ವವಾದ ಗೋವರ್ಧನ ಗುಹಾ ದೇವಾಲಯನ್ನು ನೋಡಿದ ಭಾವಿ ಪರ್ಯಾಯ ಶ್ರೀಪಾದರು ಕೆತ್ತಿದ ಶ್ರೀ ಕೃಷ್ಣನ ಮಹಿಮಾಚಿತ್ರಗಳನ್ನು ನೋಡಿ ವಿಶೇಷವಾಗಿ ಮೆಚ್ಚಿಕೊಂಡರು.




By
ForthFocus™