Tuesday, July 28, 2026
Tuesday, July 28, 2026

ಅನಧಿಕೃತ ಗಿಡ; ತೆಂಗು ಬೆಳೆಗಾರರಿಗೆ ಎಚ್ಚರಿಕೆ

ಅನಧಿಕೃತ ಗಿಡ; ತೆಂಗು ಬೆಳೆಗಾರರಿಗೆ ಎಚ್ಚರಿಕೆ

Date:

ಉಡುಪಿ, ಫೆ.17: ಉಡುಪಿ, ಕಾಪು ಹಾಗೂ ಬ್ರಹ್ಮಾವರ ತಾಲೂಕುಗಳಲ್ಲಿ ವಿವಿಧ ಜಾತಿಯ ತೆಂಗು ಸಸಿಗಳೆಂದು ಹೊರ ರಾಜ್ಯದ ನರ್ಸರಿಗಳವರು ಅನಧಿಕೃತವಾಗಿ ಗ್ಯಾರಂಟಿ ಇಲ್ಲದೆ ಗಿಡಗಳನ್ನು ತಂದು ರೋಡು ಬದಿಗಳಲ್ಲಿ, ಎರಡು ವರ್ಷಗಳಲ್ಲಿ ಪಸಲು ಬರುವುದಾಗಿ ನಂಬಿಸಿ ಅತಿ ಹೆಚ್ಚು ದರದಲ್ಲಿ ಪ್ರತಿ ತೆಂಗಿನ ಸಸಿಗಳಿಗೆ 1500 ರೂ. ವರೆಗೂ ಮಾರಾಟ ಮಾಡಿ ರೈತರಿಗೆ ಮೋಸ ಮಾಡುತ್ತಿರುವುದು ತೋಟಗಾರಿಕೆ ಇಲಾಖೆಯ ಗಮನಕ್ಕೆ ಬಂದಿರುತ್ತದೆ. ಆದ್ದರಿಂದ ಸಾರ್ವಜನಿಕರು, ಜಿಲ್ಲೆಯಲ್ಲಿರುವ ಅಧಿಕೃತ ನರ್ಸರಿಗಳು, ತೋಟಗಾರಿಕಾ ಇಲಾಖೆ ನರ್ಸರಿಗಳು ಹಾಗೂ ಕೃಷಿ ವಿಜ್ಞಾನ ಕೇಂದ್ರದಲ್ಲಿ ಅಧಿಕೃತವಾಗಿ ಉತ್ಪಾದನೆ ಮಾಡಿದಂತ ಕಸಿ/ ಸಸಿಗಳನ್ನು ಖರೀದಿಸುವಂತೆ ಹಾಗೂ ಸಂಬಂಧಪಟ್ಟವರಿಂದ ಬಿಲ್ಲನ್ನು ಶೀಘ್ರವಾಗಿ ಪಡೆದುಕೊಳ್ಳುವಂತೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿ ಪ್ರಕಟಣೆ ತಿಳಿಸಿದೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ನಿವೃತ್ತ ಶಿಕ್ಷಕ ಮಲ್ಪೆ ರಾಘವೇಂದ್ರರಿಗೆ ಸೇವಾ ಪ್ರಶಸ್ತಿ

ಕಟಪಾಡಿ, ಜು.28: ಶ್ರೀ ಕ್ಷೇತ್ರ ಶಂಕರಪುರ ಶ್ರೀ ಸಾಯಿ ಮುಖ್ಯಪ್ರಾಣ ದೇವಸ್ಥಾನದಲ್ಲಿ...

ಹೆಜಮಾಡಿ ಟೋಲ್ ಸಮಸ್ಯೆ: ಅಧಿಕಾರಿಗಳು ಮತ್ತು ಸ್ಥಳೀಯರೊಂದಿಗೆ ಶಾಸಕರ ಸಭೆ

ಹೆಜಮಾಡಿ, ಜು.28: ಹೆಜಮಾಡಿ ಟೋಲ್ ಸಮಸ್ಯೆಗೆ ಸಂಬಂಧಿಸಿದಂತೆ ಶಾಸಕರಾದ ಗುರ್ಮೆ ಸುರೇಶ್...

ಶ್ರೀ ಕಾಮೇಶ್ವರ ದೇವಸ್ಥಾನ ಬೈಕಾಡಿ: ಸಮಿತಿ ಸದಸ್ಯರಿಂದ ಧರ್ಮಸ್ಥಳ ಭೇಟಿ

ಬ್ರಹ್ಮಾವರ, ಜು.28: ಶ್ರೀ ಕಾಮೇಶ್ವರ ದೇವಸ್ಥಾನ ಬೈಕಾಡಿ ಇದರ ಅಭಿವೃದ್ಧಿ ಮತ್ತು...
error: Content is protected !!