Home ಸುದ್ಧಿಗಳು ಪ್ರಾದೇಶಿಕ ತೆಂಕನಿಡಿಯೂರು ಪ್ರೊ ಕಬಡ್ಡಿ- ಅರ್ಧನಾರೀಶ್ವರ ಚಾಂಪಿಯನ್

ತೆಂಕನಿಡಿಯೂರು ಪ್ರೊ ಕಬಡ್ಡಿ- ಅರ್ಧನಾರೀಶ್ವರ ಚಾಂಪಿಯನ್

358
0

ಉಡುಪಿ: ತೆಂಕನಿಡಿಯೂರು ಸ್ಪೋರ್ಟ್ಸ್ ಕ್ಲಬ್ ಮತ್ತು ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಇವರ ಆಶ್ರಯದಲ್ಲಿ ನಡೆದ ಪ್ರೊ ಕಬ್ಬಡಿ ಚಾಂಪಿಯನ್ಶಿಪ್ ಪಂದ್ಯಾವಳಿಯಲ್ಲಿ ಮುಟ್ಲುಪಾಡಿಯ ಅರ್ಧನಾರೀಶ್ವರ ತಂಡವು ಚಾಂಪಿಯನ್ಶಿಪ್ ಗಳಿಸಿದೆ.

ತಂಡವು ಮೂಡಬಿದ್ರೆಯ ಆಳ್ವಾಸ್ ತಂಡವನ್ನು ಮಣಿಸಿತು. ಆಳ್ವಾಸ್ ತಂಡವು ರನ್ನರ್ಸ್ ಪ್ರಶಸ್ತಿ ಗಳಿಸಿತು.

ಉಜಿರೆ ಎಸ್.ಡಿ.ಎಂ. ಕಾಲೇಜು ತಂಡವು ತೃತೀಯ ಸ್ಥಾನ ಗಳಿಸಿತು. ತತ್ವಮಸಿ ಬಿಗಾಂಬಲ ತಂಡವು ಚತುರ್ಥ ಸ್ಥಾನ ಪಡೆಯಿತು.

ಆಳ್ವಾಸ್‌ನ ವಿಶ್ವನಾಥ್ ಅತ್ಯುತ್ತಮ ರೈಡರ್, ಅರ್ಧನಾರೀಶ್ವರ ತಂಡದ ಪ್ರೀತಮ್ ಅತ್ಯುತ್ತಮ ಡಿಫೆಂಡರ್, ಎಸ್.ಡಿ.ಎಂ.ನ ಶಶಾಂಕ್ ಸರ್ವಾಂಗೀಣ ಆಟಗಾರ ಪ್ರಶಸ್ತಿ ಗಳಿಸಿದರು.

ಒಟ್ಟು ಹದಿನಾರು ತಂಡಗಳು ಭಾಗವಹಿಸಿದ್ದವು. ಶಾಸಕ ಕೆ. ರಘುಪತಿ ಭಟ್ ಪಂದ್ಯಾವಳಿಯನ್ನು ಉದ್ಘಾಟಿಸಿ
ತೆಂಕನಿಡಿಯೂರು ವಿದ್ಯಾಸಂಸ್ಥೆಗಳನ್ನು ಕ್ರೀಡೆಯಲ್ಲಿ ಇನ್ನಷ್ಟು ಸಬಲೀಕರಣಗೊಳಿಸಲು ಕ್ರಮ ಕೈಗೊಳ್ಳಲಾಗುವುದಾಗಿ ಹೇಳಿದರು.

ಪ್ರಾಂಶುಪಾಲ ಡಾ. ಗಣನಾಥ ಎಕ್ಕಾರು ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಹರಿಯಪ್ಪ ಕೋಟ್ಯಾನ್ ಶಿಕ್ಷಣ ತಜ್ಞ ದಯಾನಂದ ಶೆಟ್ಟಿ ಕೊಜಕುಳಿ, ಪ್ರಾಂಶುಪಾಲ ವಿಶ್ವನಾಥ ಕರಬ ಅತಿಥಿಗಳಾಗಿ ಭಾಗವಹಿಸಿದ್ದರು.

ತೆಂಕನಿಡಿಯೂರು ಸ್ಪೋರ್ಟ್ಸ್ ಕ್ಲಬ್‌ ವತಿಯಿಂದ ನಿವೃತ್ತ
ಪ್ರಾಂಶುಪಾಲ ಪ್ರೊ. ಬಾಲಕೃಷ್ಣ ಎಸ್. ಹೆಗ್ಡೆ, ಪ್ರಾಂಶುಪಾಲ ಡಾ. ಗಣನಾಥ ಶೆಟ್ಟಿ ಎಕ್ಕಾರು, ಕಾಲೇಜಿನ ಸಿಬ್ಬಂದಿ ಯು. ಶೇಖ್ ಸಾಬ್ಜಾನ್ ಸಾಹೇಬ್, ಪೊಲೀಸ್ ಇನ್ಸ್ಫೆಕ್ಟರ್ ಪ್ರಮೋದ್ ಕುಮಾರ್, ಕಾತ್ಯಾಯಿನಿ ಆಳ್ವ ಇವರನ್ನು
ಸನ್ಮಾನಿಸಲಾಯಿತು.

ಪ್ರಸ್ತಾವನೆಯೊಂದಿಗೆ ದೈಹಿಕ ಶಿಕ್ಷಣ ನಿರ್ದೇಶಕ ಡಾ. ರಾಮಚಂದ್ರ ಪಾಟ್ಕರ್ ಸ್ವಾಗತಿಸಿ, ಕನ್ನಡ ಉಪನ್ಯಾಸಕಿ
ರತ್ನಮಾಲಾ ವಂದಿಸಿದರು. ತೇಜಸ್ ಬಂಗೇರ ಕಾರ್ಯಕ್ರಮ
ನಿರ್ವಹಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.