Saturday, January 17, 2026
Saturday, January 17, 2026

ಬ್ರಹ್ಮಾವರ: ವಿಶ್ವ ಮಾನಸಿಕ ಆರೋಗ್ಯ ದಿನ

ಬ್ರಹ್ಮಾವರ: ವಿಶ್ವ ಮಾನಸಿಕ ಆರೋಗ್ಯ ದಿನ

Date:

ಬ್ರಹ್ಮಾವರ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಉಡುಪಿ ಜಿಲ್ಲೆ, ಕಮಲಾ.ಎ.ಬಾಳಿಗಾ ಚಾರಿಟೇಬಲ್ ಟ್ರಸ್ಟ್ ಮುಂಬೈ, ಡಾ.ಎ.ವಿ.ಬಾಳಿಗ ಸ್ಮಾರಕ ಆಸ್ಪತ್ರೆ ಉಡುಪಿ, ಭಾರತೀಯ ಮನೋವೈದ್ಯಕೀಯ ಸಂಘ ದಕ್ಷಿಣ ಪ್ರಾಂತ್ಯ ಘಟಕ, ಸಮುದಾಯ ಮಾನಸಿಕ ಅರಿವು ಮೂಡಿಸುವ ಗುಂಪು ಉಡುಪಿ, ಮನೋ ವೈದ್ಯಕೀಯ ಸಂಘ ಇವರ ಜಂಟಿ ಆಶ್ರಯದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನವನ್ನು ಇಂದು ಸಮುದಾಯ ಪ್ರಾರ್ಥನ ಕೇಂದ್ರ ಅಣ್ಣಪ್ಪ ನಗರ ಹಾರಾಡಿಯಲ್ಲಿ ಆಯೋಜಿಸಲಾಯಿತು.

ಕಾರ್ಯಕ್ರಮನ್ನು ಕಾನೂನು‌ ಸೇವೆಗಳ ಪ್ರಾಧಿಕಾರ ಉಡುಪಿ ಇದರ ಸದಸ್ಯ ಕಾರ್ಯದರ್ಶಿಗಳಾದ ಶರ್ಮಿಳಾ ಎಸ್ ರವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಮಾನಸಿಕ ರೋಗಿಗಳನ್ನು ಮಾನವೀಯತೆಯ ನಿಲುವಿನಲ್ಲಿ ಸಮಾಜ ನೋಡಬೇಕು. ಮಾನಸಿಕ ರೋಗಿಗಳನ್ನು ತಾರತಮ್ಯ, ಭೇಧಭಾವದಿಂದ ನೋಡುವುದು, ಕಾನೂನಿನ ಅಡಿಯಲ್ಲಿ ಅಪರಾಧ. ಎಲ್ಲಾ ಸ್ಥರದ ಮಾನಸಿಕ‌ ಕಾಯಿಲೆಗಳಿಗೂ ಚಿಕಿತ್ಸೆ ದೊರೆಯುವಂತೆ‌ ಅಗಬೇಕು ಎಂದು ಹೇಳಿದರು.

ಮನೋರೋಗಕ್ಕೆ ಚಿಕಿತ್ಸೆಗಳು ಹಾಗೂ ಮಾನಸಿಕ ‌ಆರೋಗ್ಯದ ಬಗ್ಗೆ ಸಮುದಾಯ ಜಾಗೃತಿ ಕಾರ್ಯಕ್ರಮಗಳು ಮಾನಸಿಕ ಆರೋಗ್ಯ ಸಮತೋಲನಕ್ಕೆ‌ ಅವಶ್ಯಕ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡ ಡಾ.ಎ.ವಿ.ಬಾಳಿಗ ಸಮೂಹ ಸಂಸ್ಥೆಯ ನಿರ್ದೇಶಕರು, ಮನೋವೈದ್ಯರಾದ ಡಾ.ಪಿ.ವಿ.ಭಂಡಾರಿ ಹೇಳಿದರು.

ಒನ್ ಗುಡ್ ಸ್ಟಪ್ ಸಂಸ್ಥೆಯ ಸಂಸ್ಥಾಪಕರು ಅಡಳಿತ ವಿಶ್ವಸ್ಥರಾದ ಅಮಿತಾ ಪೈ ರವರು ಸಂಘ ಸಂಸ್ಥೆಗಳು ಸಮುದಾಯದಲ್ಲಿ ಮಾನಸಿಕ‌ ಆರೋಗ್ಯ ಕುರಿತು ಅರಿವು ಮೂಡಿಸಬೇಕು ಎಂದು‌ರು.

ರೋಟರಿ ಸಂಸ್ಥೆ ಬ್ರಹ್ಮಾವರದ ಮಾಜಿ‌ ಅಧ್ಯಕ್ಷರಾದ ವಾಲ್ಟರ್ ಸಿರಿಲ್ ಪಿಂಟೋ,‌ ರೋಟರಿ ಶಂಕರಪುರದ ನಿಕಟಪೂರ್ವ ಅಧ್ಯಕ್ಷರಾದ ಎಡ್ವರ್ಡ್ ಮೆಂಡೊನ್ಸಾ ಇವರು ಮುಖ್ಯ‌ ಅತಿಥಿಗಳಾಗಿ ಭಾಗವಹಿಸಿದರು. ಸಂಸ್ಥೆಯ ಮನೋವೈದ್ಯರಾದ ಡಾ.ಮಾನಸ್ ಉಪಸ್ಥಿತರಿದ್ದರು.

ಸಂಸ್ಥೆಯ ಮನಶಾಸ್ತ್ರಜ್ಞರಾದ ನಾಗರಾಜಮೂರ್ತಿ ಇವರು ಸ್ವಾಗತಿಸಿ, ಸಹನಾ ಪ್ರಾರ್ಥಿಸಿ, ಅಪ್ತ ಸಮಲೋಚಕರಾದ ಪದ್ಮ ರಾಘವೇಂದ್ರ ವಂದಿಸಿದರು. ಅಪ್ತ ಸಮಲೋಚಕಾರದ ದೀಪಾ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿವಿಧ ಸಂಸ್ಥೆಯ ವಿದ್ಯಾರ್ಥಿಗಳಿಗೆ ಮಾನಸಿಕ ಆರೋಗ್ಯದ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ನೀಡಲಾಯಿತು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪರ್ಯಾಯ ಮಹೋತ್ಸವ: ಪರಿಷ್ಕೃತ ಮಾರ್ಗ ಬದಲಾವಣೆ ಅಧಿಸೂಚನೆ

ಉಡುಪಿ, ಜ.16: ಉಡುಪಿ ಶ್ರೀ ಕೃಷ್ಣ ಮಠದ ಪರ್ಯಾಯ ಮಹೋತ್ಸವದ ಹಿನ್ನೆಲೆ,...

ಅಂಬಾಗಿಲು: ಪರಶುರಾಮ‌ ದ್ವಾರ ಗುದ್ದಲಿ ಪೂಜೆ

ಉಡುಪಿ, ಜ.16: ಶೀರೂರು ಮಠಾಧೀಶ ಭಾವೀ ಪರ್ಯಾಯ ಪೀಠಾಧಿಪತಿ ಶ್ರೀ ಶ್ರೀ...

ಶೀರೂರು ಪರ್ಯಾಯ ಒಲಿಪೆ‌ ಸಮರ್ಪಣೆ

ಉಡುಪಿ, ಜ.೧೬: ಪ್ರತಿ ಪರ್ಯಾಯ ಸಂದರ್ಭದಲ್ಲಿ ಪರ್ಯಾಯ ಪೀಠವೇರುವ ಮಠದಿಂದ ಇತರ...
error: Content is protected !!