Home ಸುದ್ಧಿಗಳು ಪ್ರಾದೇಶಿಕ ಪತ್ರಕರ್ತ ಮನೋಹರ್‌ ಪ್ರಸಾದ್‌ ಅವರಿಗೆ ಜ್ಞಾನಸುಧಾ ಸಂಸ್ಥೆ ವತಿಯಿಂದ ಸನ್ಮಾನ

ಪತ್ರಕರ್ತ ಮನೋಹರ್‌ ಪ್ರಸಾದ್‌ ಅವರಿಗೆ ಜ್ಞಾನಸುಧಾ ಸಂಸ್ಥೆ ವತಿಯಿಂದ ಸನ್ಮಾನ

384
0

ಕಾರ್ಕಳ: ಕಾರ್ಕಳ ಗಣಿತ ನಗರ ಜ್ಞಾನಸುಧಾ ಸಂಸ್ಥೆಯ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಮನೋಹರ್‌ ಪ್ರಸಾದ್‌ ಅವರನ್ನು ಸನ್ಮಾನಿಸಲಾಯಿತು.

ಜ್ಞಾನಸುಧಾ ಸಂಸ್ಥೆಗಳ ಅಧ್ಯಕ್ಷ ಡಾ. ಸುಧಾಕರ್‌ ಶೆಟ್ಟಿ ಅವರು ಸನ್ಮಾನಿಸಿದರು. ಬಳಿಕ ಮಾತನಾಡಿದ ಅವರು, ನಾಡು ಕಂಡ ಶ್ರೇಷ್ಠ ಪತ್ರಕರ್ತರಲ್ಲಿ ಮನೋಹರ್‌ ಪ್ರಸಾದ್‌ ಅವರು ಅಗ್ರಗಣ್ಯರಾಗಿ ಗುರುತಿಸಿಕೊಂಡವರು. ದೇಶ, ವಿದೇಶ ಸುತ್ತಿ ನೂರಾರು ವಿಶೇಷ ವರದಿ, ಸಂದರ್ಶನ, ಸಾವಿರಾರು ಕಾರ್ಯಕ್ರಮ ನಿರೂಪಣೆ ಮೂಲಕ ಮನೆಮಾತಾಗಿರುವ ಮನೋಹರ್‌ ಪ್ರಸಾದ್‌ ಅವರು ಕಾರ್ಕಳದವರೆಂಬ ಹೆಮ್ಮೆ ನಮ್ಮದು. ಅಗಾಧ ಅನುಭವ, ನೆನಪಿನ ಶಕ್ತಿ, ಮೃದು ಮಾತಿನ ಮೂಲಕವೇ ಜನಮನ್ನಣೆ ಗಳಿಸಿರುವ ಮನೋಹರ್‌ ಅವರು ಯುವಕರಿಗೆ ಮಾದರಿಯೆಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಮನೋಹರ್‌ ಪ್ರಸಾದ್‌ ಅವರು, ಕಾರ್ಕಳ ಸಮೀಪದ ಗ್ರಾಮೀಣ ಪ್ರದೇಶದಲ್ಲಿ ಶೈಕ್ಷಣಿಕ ಚೈತನ್ಯದ ಮೂಲಕ ಆದರ್ಶ ಸಮಾಜವನ್ನು ಕಟ್ಟುವಲ್ಲಿ ಡಾ. ಸುಧಾಕರ್‌ ಶೆಟ್ಟಿ ಅವರ ದೂರದರ್ಶಿತ್ವದ ಜ್ಞಾನಸುಧಾ ಸಂಸ್ಥೆಯ ಕೊಡುಗೆ ಅದ್ವಿತೀಯ ಎಂದು ಶ್ಲಾಘಿಸಿದರು.

ಕಾಲೇಜಿನ ಪ್ರಾಂಶುಪಾಲ ದಿನೇಶ್‌, ಸಾರ್ವಜನಿಕ ಸಂಪರ್ಕಾಧಿಕಾರಿ ಜ್ಯೋತಿ ಪದ್ಮನಾಭ ಭಂಡಿ, ನ್ಯೂಸ್‌ ಕಾರ್ಕಳ ನಿರ್ದೇಶಕ ಪದ್ಮಪ್ರಸಾದ್‌ ಜೈನ್‌, ರಾಮಚಂದ್ರ ಬರೆಪ್ಪಾಡಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.