Home ಸುದ್ಧಿಗಳು ಪ್ರಾದೇಶಿಕ ಇಂಟರಾಕ್ಟ್ ಸಂಸ್ಥೆಯಿಂದ ವ್ಯಕ್ತಿತ್ವ ವಿಕಸನ: ಆನಂದ್ ಶೆಟ್ಟಿ

ಇಂಟರಾಕ್ಟ್ ಸಂಸ್ಥೆಯಿಂದ ವ್ಯಕ್ತಿತ್ವ ವಿಕಸನ: ಆನಂದ್ ಶೆಟ್ಟಿ

381
0

ಶಿರಿಯಾರ: ಮಹಾತ್ಮ ಗಾಂಧಿ ಪ್ರೌಢಶಾಲೆ ಸಾಯ್ಬರಕಟ್ಟೆ ಇದರ 2021-22ನೇ ಸಾಲಿನ ಇಂಟರಾಕ್ಟ್ ಕ್ಲಬ್ ನ ಪದಗ್ರಹಣ ಸಮಾರಂಭವು ರೋಟರಿ ಕ್ಲಬ್ ಸಾಯ್ಬರಕಟ್ಟೆಯ ಪ್ರಾಯೋಜಕತ್ವದಲ್ಲಿ ನಡೆಯಿತು. ಪದಪ್ರದಾನಾಧಿಕಾರಿಗಳಾಗಿ ರೋಟರಿ ಜಿಲ್ಲಾ ಇಂಟರಾಕ್ಟ್ ವೈಸ್ ಚೇರ್ಮನ್ ಆನಂದ್ ಶೆಟ್ಟಿಯವರು ನೂತನ ಅಧ್ಯಕ್ಷ ಹಾಗೂ ಕಾರ್ಯದರ್ಶಿಗಳಿಗೆ ಪದಪ್ರದಾನ ಮಾಡಿದರು. ಬಳಿಕ ಮಾತನಾಡಿದ ಅವರು, ವ್ಯಕ್ತಿಯಿಂದ ವ್ಯಕ್ತಿತ್ವದೆಡೆಗೆ, ಸ್ವಾರ್ಥದಿಂದ ನಿಸ್ವಾರ್ಥದೆಡೆಗೆ, ಸ್ವಹಿತದಿಂದ ಪರಹಿತದೆಡೆಗೆ ಚಿಂತನೆಮಾಡಲು ಇಂಟರಾಕ್ಟ್ ನಂತಹ ಸಂಸ್ಥೆಗಳು ಸಹಾಯಕ. ಇಂತಹ ಸಂಸ್ಥೆಗಳಲ್ಲಿ ಎಳವೆಯಿಂದಲೇ ತೊಡಗಿಸಿಕೊಳ್ಳುವುದರಿಂದ ವ್ಯಕ್ತಿತ್ವ ಪರಿಪೂರ್ಣಗೊಳ್ಳಲು ಸಹಾಯವಾಗುವುದು ಎಂದರು.

ಇಂಟರಾಕ್ಟ್ ಝೋನಲ್ ಸಮನ್ವಯಕಾರ ರಾಜಾರಾಮ ಐತಾಳ ಶುಭ ಹಾರೈಸಿದರು. ವಲಯ ಪ್ರತಿನಿಧಿ ವಿಜಯಕುಮಾರ ಶೆಟ್ಟಿ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳುವಂತೆ ಸೂಚಿಸಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ರವೀಂದ್ರನಾಥ ಶೆಟ್ಟಿ, ರೋಟರಿ ಕ್ಲಬ್ ನ ಕಾರ್ಯದರ್ಶಿ ಅಣ್ಣಯ್ಯದಾಸ್, ಯೂಥ್ ಚೇರ್ಮನ್ ಅಜಿತ್ ಜೋಗಿ ಹಾಗೂ ಕ್ಲಬ್ ನ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಪೂರ್ವಾಧ್ಯಕ್ಷ ಶ್ರೀಕೃಷ್ಣ ಶಾನುಭಾಗ್ ರವರ ವತಿಯಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಸಾಯ್ಬರಕಟ್ಟೆ ಯ ಅಧ್ಯಕ್ಷ ಪ್ರಸಾದ ಭಟ್ ವಹಿಸಿ ಸೇವೆ ಮಾಡಲು, ಎಲ್ಲಕ್ಕಿಂತ ತೊಡಗಿಸಿಕೊಳ್ಳುವ ಮನಸ್ಸೂ ಮುಖ್ಯ ಎಂದರು.

ಇಂಟರಾಕ್ಟ್ ಕ್ಲಬ್ ನ ನೂತನ ಅಧ್ಯಕ್ಷೆ ಮಾನ್ಯ, ಕಾರ್ಯದರ್ಶಿ ಚಿನ್ನ, ನಿಕಟಪೂರ್ವಾಧ್ಯಕ್ಷೆ ಐಶ್ವರ್ಯ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಸತೀಶ್ ನಾಯ್ಕ್ ಸ್ವಾಗತಿಸಿ, ಶಿಕ್ಷಕಿ ಡೈಸಿ ಡಿಸಿಲ್ವ ವಂದಿಸಿದರು. ಶಿಕ್ಷಕ ಶಿರಿಯಾರ ಗಣೇಶ ನಾಯಕ್ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.