Friday, January 16, 2026
Friday, January 16, 2026

ಗೂಡು ಖಾಲಿಯಾದಾಗ

ಗೂಡು ಖಾಲಿಯಾದಾಗ

Date:

ಕ್ಕಳು ದೊಡ್ಡವರಾಗಿ ಉನ್ನತ ವ್ಯಾಸಂಗಕ್ಕಾಗಿ ಅಥವಾ ಕೆಲಸಕ್ಕಾಗಿ ದೂರದ ಸ್ಥಳಕ್ಕೆ ಅಥವಾ ಬೇರೆ ದೇಶಕ್ಕೆ ಹೋದಾಗ ತಾಯಿ ತಂದೆಗೆ ಕಾಡುವ ಸಮಸ್ಯೆ ಒಂಟಿತನ. ಮಕ್ಕಳಿಗೆ ಸಾಕಿ ಸಲಹಿ ದೊಡ್ಡವರಾದ ಮೇಲೆ ತಮ್ಮಿಂದ ದೂರ ಕಳುಹಿಸಬೇಕಲ್ಲ ಎನ್ನುವ ಚಿಂತೆ ಒಂದೆಡೆಯಾದರೆ, ತಮ್ಮ ಮಕ್ಕಳು ತಮ್ಮ ತಮ್ಮ ಕನಸನ್ನು ಪೂರೈಸುತ್ತಿದ್ದಾರೆ ಎನ್ನುವ ಸಂತೋಷ ಇನ್ನೊಂದೆಡೆ. ಕೆಲವರು ಇದರಿಂದ ಬೇಗ ಹೊರಬಂದರೆ ಕೆಲವರು ಖಿನ್ನತೆಗೆ ಒಳಗಾಗುತ್ತಾರೆ. ಇದನ್ನು ಎಂಟಿ ನೆಕ್ಸ್ಟ್ ಸಿಂಡ್ರೋಮ್ (empty nest syndrome) ಎಂದು ಕರೆಯುತ್ತಾರೆ.

ಏನಿದು ಎಂಟಿ ನೆಸ್ಟ್ ಸಿಂಡ್ರೋಮ್? ಮಕ್ಕಳು ಮೊದಲ ಬಾರಿಗೆ ಮನೆ ಬಿಟ್ಟು ಬೇರೆ ಸ್ಥಳಗಳಿಗೆ ಹೋದಾಗ ಕಾಡುವ ಭಾವನಾತ್ಮಕ ಏರುಪೇರು ಇದು. ಚಿಕ್ಕಂದಿನಿಂದ ಪಾಲನೆ ಪೋಷಣೆ ಅವರ ಕೆಲಸ ಮಾಡಿ ಸಂತೋಷದಿಂದ ಸಮಯ ಕಳೆಯುತ್ತಿದ್ದ ಪಾಲಕರಿಗೆ ಒಂದೇ ಸಮನೆ ಮಕ್ಕಳು ಮನೆ ಬಿಟ್ಟು ಹೋದಾಗ ಒಂಟಿತನ ಕಾಡುತ್ತದೆ ಖಿನ್ನತೆಗೆ ಕಾರಣವಾಗುತ್ತದೆ. ಮಕ್ಕಳ ಬೆಳವಣಿಗೆಯಲ್ಲಿ ತಾಯಿಯ ಪಾತ್ರ ದೊಡ್ಡದಿರುವುದರಿಂದ ತಾಯಂದಿರಿಗೆ ಇದು ಕಾಡುವುದು ಜಾಸ್ತಿ. ಇದು ಎಲ್ಲರಿಗೂ ಆಗಬೇಕೆಂದೇನಿಲ್ಲ ಕೆಲವರಿಗೆ ಇದರಿಂದ ಹೊರಬರಲು ಕಷ್ಟವಾಗುತ್ತದೆ. ಇಡೀ ದಿನ ಮಕ್ಕಳ ಚಿಂತೆಯಲ್ಲಿಯೇ ದಿನವನ್ನು ಕಳೆಯುತ್ತಾರೆ. ಹೀಗೆ ಮಾಡುವುದರಿಂದ ತಮ್ಮ ಭಾವನೆಗಳನ್ನು ಹಿಡಿತದಲ್ಲಿ ಇಡಲಿಕ್ಕೆ ಆಗದೆ ಜೀವನವೇ ಶೂನ್ಯ ಎಂದು ಎನಿಸುವುದು. ಇದರಿಂದ ದುಃಖ, ನಿದ್ರಾಹೀನತೆಗೆ ಜಾರುತ್ತಾರೆ ಕೋಪಗೊಳ್ಳುತ್ತಾರೆ. ಬೇರೆಯವರಿಗೆ ಬೇರೆ ಬೇರೆ ಸಮಸ್ಯೆ ಕಾಣಬಹುದು.

ಇದರಿಂದ ಹೊರಬರುವುದು ಹೇಗೆ? ಇಲ್ಲಿ ಮುಖ್ಯವಾಗಿ ನಮ್ಮ ಮನಸ್ಥಿತಿಯನ್ನು ಬದಲಿಸಿಕೊಳ್ಳುವುದೊಂದೇ ಪರಿಹಾರ. ಇಷ್ಟು ವರ್ಷ ಮಕ್ಕಳಿಗೋಸ್ಕರ ಸಮಯವನ್ನು ಮೀಸಲಿಡುತ್ತಿದ್ದೀರಿ. ಈಗ ನಿಮಗೋಸ್ಕರ ಸಮಯವನ್ನು ಕಳೆಯಿರಿ. ಮಕ್ಕಳು ದೊಡ್ಡವರಾದಂತೆ ಜವಾಬ್ದಾರಿ ಕಡಿಮೆಯಾಗುತ್ತಾ ಬಂದಾಗ ನಿಮ್ಮ ಹವ್ಯಾಸಗಳನ್ನು ಶುರು ಮಾಡಿ. ಮನಸ್ಸನ್ನು ಮೊದಲು ತಯಾರಿಸಿ. ಮಕ್ಕಳು ಇನ್ನು ಮುಂದೆ ಅವರ ಕಾಲ ಮೇಲೆ ನಿಲ್ಲುತ್ತಾರೆ ಎಂದು ಸಂತೋಷಪಡಿ. ಈಗಂತೂ ವಿಡಿಯೋ ಕಾಲ್ ಲಭ್ಯವಿದೆ ದೇಶದ ಯಾವ ಮೂಲೆಯಲ್ಲಿದ್ದರೂ ನೋಡಬಹುದು ಮಾತನಾಡಬಹುದು. ನಿಮ್ಮ ಬಾಳ ಸಂಗಾತಿಯೊಂದಿಗೆ ಸಮಯ ಕಳೆಯಿರಿ. ಚಿಕ್ಕ ಚಿಕ್ಕ ಟ್ರಿಪ್ ಟೂರ್ ಗೆ ಹೋಗಿ. ಗೆಳೆಯರೊಂದಿಗೆ ಸಮಯ ಕಳೆಯಿರಿ. ದೇವಸ್ಥಾನ, ಆಶ್ರಮಕ್ಕೆ ಭೇಟಿ ನೀಡಿ. ಹೊಸದನ್ನು ಕಲಿಯಿರಿ. ಯೋಗಾಸನ, ಪ್ರಾಣಾಯಾಮ, ಧ್ಯಾನವನ್ನು ಮಾಡಿರಿ. ಪುಸ್ತಕಗಳನ್ನು ಓದಿರಿ, ಜೀವನವನ್ನು ನೋಡುವ ದೃಷ್ಟಿ ಬದಲಾಗುತ್ತದೆ. ತೋಟಗಾರಿಕೆ, ಹೊಲಿಯುವುದು, ಸಂಗೀತ, ಚಿತ್ರಕಲೆ, ನೃತ್ಯ ಹೀಗೆ ಬೇರೆ ಬೇರೆ ಕಲೆಗಳನ್ನು ಕಲಿಯಿರಿ ಅಥವಾ ಅದರ ಬಗ್ಗೆ ತಿಳಿದುಕೊಳ್ಳಿ. ಸಮಸ್ಯೆ ಗಂಭೀರವಾದರೆ ವೈದ್ಯರನ್ನು ಭೇಟಿಯಾಗಿ. ದುಃಖದಲ್ಲಿರುವ ಬದಲು ಅದನ್ನು ಹೇಗೆ ಸಂತೋಷವಾಗಿ ತಿರುಗಿಸಬಹುದೆಂದು ಆಲೋಚಿಸಿ, ಪಾಲಿಸಿ.

ಡಾ. ಹರ್ಷಾ ಕಾಮತ್

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

‘ಉಡುಪಿಗೆ ಬನ್ನಿ’ ಕ್ಯಾಲೆಂಡರ್ ಬಿಡುಗಡೆ

ಉಡುಪಿ, ಜ.16: ಶ್ರೀ ಶೀರೂರು ಮಠದ ಶ್ರೀ ಶ್ರೀ ವೇದವರ್ಧನ ತೀರ್ಥ...

ಹೊಸ ಮೆರುಗಿನೊಂದಿಗೆ ಉಡುಪಿ ರೈಲು ನಿಲ್ದಾಣ ಪ್ರಯಾಣಿಕರಿಗೆ ಲಭ್ಯ: ಸಂಸದ ಕೋಟ ಶ್ರೀನಿವಾಸ ಪೂಜಾರಿ

ಉಡುಪಿ, ಜ.14: ಉಡುಪಿ ರೈಲು ನಿಲ್ದಾಣದ ಪ್ರಯಾಣಿಕರ ಬಹು ದಿನಗಳ ಬೇಡಿಕೆ...

ಶೀರೂರು ಪರ್ಯಾಯ ನಗರ ವಿದ್ಯುದ್ದೀಪಾಲಂಕಾರ ಉದ್ಘಾಟನೆ

ಉಡುಪಿ, ಜ.15: ಶೀರೂರು ಪರ್ಯಾಯದ ವಿದ್ಯುತ್ ದೀಪಾಲಂಕಾರದ ಉದ್ಘಾಟನೆಯನ್ನು ಜಿಲ್ಲಾಧಿಕಾರಿ ಸ್ವರೂಪ...

ಸಂಜೀವಿನಿ ಮಹಿಳೆಯರ ಕ್ರೀಡಾಕೂಟ

ಉಡುಪಿ, ಜ.15: ರಾಷ್ಟ್ರಿಯ ಗ್ರಾಮೀಣ ಜೀವನೋಪಾಯ ಅಭಿಯಾನ -ಸಂಜೀವಿನಿ, ಸ್ವರ್ಣ ಸಂಜೀವಿನಿ...
error: Content is protected !!