Home ಸುದ್ಧಿಗಳು ಪ್ರಾದೇಶಿಕ ಸನಾತನ ಯಕ್ಷಾಲಯ ಮಂಗಳೂರು: 12ನೇ ವಾರ್ಷಿಕೋತ್ಸವ

ಸನಾತನ ಯಕ್ಷಾಲಯ ಮಂಗಳೂರು: 12ನೇ ವಾರ್ಷಿಕೋತ್ಸವ

721
0

ಉಡುಪಿ: ಯಕ್ಷಗುರು ರಾಕೇಶ್ ರೈ ಅಡ್ಕ ನೇತೃತ್ವದ ಸನಾತನ ಯಕ್ಷಾಲಯ ಮಂಗಳೂರು ಸಂಸ್ಥೆಯು ತನ್ನ 12ನೇ ವಾರ್ಷಿಕೋತ್ಸವವನ್ನು ಆಗಸ್ಟ್ 10 ರಂದು ಆಚರಿಸಿಕೊಳ್ಳುತ್ತಿದೆ. ಈ ಪ್ರಯುಕ್ತ ಸಂಸ್ಥೆಯ ವಿದ್ಯಾರ್ಥಿಗಳಿಂದ ಸಂಜೆ 4.00 ರಿಂದ ಪೂರ್ವರಂಗ ಮತ್ತು ಸಂಜೆ 4.30 ರಿಂದ ಪಣಂಬೂರು ವೆಂಕಟ್ರಾಯ ಐತಾಳ ಸಾಂಸ್ಕೃತಿಕ ಪ್ರತಿಷ್ಠಾನ, ಉಡುಪಿ ಇದರ ವಿದ್ಯಾರ್ಥಿಗಳಿಂದ ಅತೀ ಅಪರೂಪವಾಗಿ ಕಾಣಸಿಗುವ ಒಡ್ಡೋಲಗಗಳು ಹಾಗೂ ತೆರೆ ಕಲಾಸುಗಳ ಪ್ರದರ್ಶನ ಕಾರ್ಯಕ್ರಮ ನಡೆಯಲಿದೆ. 

ಇತ್ತೀಚೆಗೆ ಯಕ್ಷಗಾನ ಪ್ರದರ್ಶನಗಳು ಪ್ರೇಕ್ಷಕರ ಅನುಕೂಲಕ್ಕೆ ತಕ್ಕಂತೆ ಕಾಲಮಿತಿಯಾಗಿ ಪ್ರದರ್ಶನಗೊಳ್ಳುತ್ತಿದ್ದು ಪೂರ್ವರಂಗ ಮತ್ತು ಒಡ್ಡೋಲಗಗಳು ಕಾಣೆಯಾಗುತ್ತಿವೆ. ಯಕ್ಷಗುರು ರಾಕೇಶ್ ರೈ ಅಡ್ಕರವರು ತನ್ನ ವಿದ್ಯಾರ್ಥಿಗಳಿಂದ ಒಂದೇ ವೇದಿಕೆಯಲ್ಲಿ ಪೂರ್ವರಂಗ ಮತ್ತು ವಿವಿಧ ಬಗೆಯ ಒಡ್ಡೋಲಗಗಳು ಹಾಗೂ ತೆರೆ ಕಲಾಸುಗಳ ಅಪೂರ್ವ ಪ್ರದರ್ಶನವನ್ನು ಪ್ರೇಕ್ಷಕರಿಗೆ ಉಣಬಡಿಸುತ್ತಿದ್ದಾರೆ. 

ತದನಂತರ ಸಭಾ ಕಾರ್ಯಕ್ರಮ ಮತ್ತು ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಕೋವಿಡ್ ನಿಂದಾಗಿ ಈ ಎಲ್ಲ ಕಾರ್ಯಕ್ರಮಗಳು ‘ಮಲ್ಯಾಡಿ ಲೈವ್’ ಯೂಟ್ಯೂಬ್ ಚಾನೆಲ್ ನಲ್ಲಿ ನೇರ ಪ್ರಸಾರವಾಗಲಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.