Home ಸುದ್ಧಿಗಳು ಪ್ರಾದೇಶಿಕ ಕಲ್ಸಂಕ ಸುಧೀರ್ ಭಟ್ ನಿಧನ

ಕಲ್ಸಂಕ ಸುಧೀರ್ ಭಟ್ ನಿಧನ

6146
0

ಉಡುಪಿ: ಗುಂಡಿಬೈಲು ದಿ. ಪುಂಡಲೀಕ ಭಟ್ ಇವರ ಪುತ್ರ, ಭಟ್ ಕ್ಯಾಟರಿಂಗ್ ಮಾಲಕ ಸುಧೀರ್ ಭಟ್ (46) ಹೃದಯಾಘಾತದಿಂದ ಗುರುವಾರ ವಿಧಿವಶರಾದರು.

ಉಡುಪಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಸದಸ್ಯರು ಮತ್ತು ಕಡಿಯಾಳಿ ಭಾರತೀಯ ಜನತಾ ಪಾರ್ಟಿಯ ಕ್ರಿಯಾಶೀಲ ಸದಸ್ಯರಾಗಿದ್ದ ಇವರು ಕೋವಿಡ್ ಸಂದರ್ಭದಲ್ಲಿ ಆಸರೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಡೆದ ಅನ್ನದಾನ ಸೇವೆಯಲ್ಲಿ ಮುಂಚೂಣಿಯಲ್ಲಿ ಕೆಲಸ ಮಾಡಿದ್ದರು. ಸುಧೀರ್ ಭಟ್ ರವರು ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು.

ಇವರು ತಾಯಿ, ಪತ್ನಿ, ಓರ್ವ ಪುತ್ರ, ಸಹೋದರನನ್ನು ಆಗಲಿದ್ದಾರೆ. ಉಡುಪಿ ಶಾಸಕ ಕೆ. ರಘುಪತಿ ಭಟ್, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ. ರಾಘವೇಂದ್ರ ಕಿಣಿ ಅವರು ಪಾರ್ಥಿವ ಶರೀರದ ದರ್ಶನ ಮಾಡಿ ಶೃದ್ಧಾಂಜಲಿ ಸಲ್ಲಿಸಿದರು.

ಸುಧೀರ್ ಭಟ್ ನಿಧನಕ್ಕೆ ಉಡುಪಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಕಡಿಯಾಳಿ, ಅಯ್ಯಪ್ಪ ಭಕ್ತವೃಂದ ಉಡುಪಿ ತೀವ್ರ ಸಂತಾಪ ವ್ಯಕ್ತಪಡಿಸಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.