ಉಡುಪಿ, ಫೆ.12: ಫೆಬ್ರುವರಿ 15 ರಂದು ಉಡುಪಿಯ ಶ್ರೀ ಕೃಷ್ಣಮಠದಲ್ಲಿ ಸಂಜೆ 6 ಘಂಟೆಯಿಂದ ಬೆಳಿಗ್ಗೆ 6 ಘಂಟೆಯ ತನಕ ಅಖಂಡ ಶಿವರಾತ್ರಿ ಉತ್ಸವ ನಡೆಯಲಿದೆ. ರಾಜಾಂಗಣದಲ್ಲಿ ಫೆಬ್ರವರಿ 15 ಭಾನುವಾರದಂದು ಸಂಜೆ ಆರು ಘಂಟೆಯಿಂದ ಮರುದಿನ ಮುಂಜಾನೆ ಆರು ಘಂಟೆಯ ತನಕ ನಿರಂತರ ಪೂಜೆ, ಪಾರಾಯಣ, ಉಪನ್ಯಾಸ, ಭಜನೆ ಕಾರ್ಯಕ್ರಮಗಳು ನಡೆಯಲಿವೆ. ವಿಷ್ಣುಸಹಸ್ರನಾಮ ಪಾರಾಯಾಣಾದಿಗಳನ್ನೂ, ಶಿವ ಪಂಚಾಕ್ಷರಿ ಮಂತ್ರ ಜಪವನ್ನು ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ವಿವರ: ಸಾಯಂ : 5.45-6.00 ಪೂಜೆ 6.00- 6.30 ಪರ್ಯಾಯ ಸ್ವಾಮಿಗಳ ಸಂದೇಶ 6.30-7.00 ಪ್ರವಚನ 7.00 – 9.30 ಸಾಂಸ್ಕೃತಿಕ ಕಾರ್ಯಕ್ರಮ 9.30-10.00 ಪೂಜೆ 10.00 – 11.00 ಪ್ರವಚನ 11.00 – 12.30 ರುದ್ರ ಪಾರಾಯಣ, ವಿಷ್ಣು ಸಹಸ್ರನಾಮ ಪಾರಾಯಣ ಪೂಜೆ 12.30-2.30 ಕುಳಿತು ಭಜನೆ ಪೂಜೆ 2.30-4.00 ಕುಣಿತ ಭಜನೆ 4.00-5.30 ರುದ್ರ ಪಾರಾಯಣ, ವಿಷ್ಣು ಸಹಸ್ರನಾಮ ಪಾರಾಯಣ ಪೂಜೆ ನಡೆಯಲಿದ್ದು, ನಾಡಿನ ಎಲ್ಲಾ ಸದ್ಭಕ್ತರು ಸಕ್ರಿಯವಾಗಿ ಪಾಲ್ಗೊಳ್ಳಬೇಕಾಗಿ ಶ್ರೀಮಠದ ದಿವಾನರಾದ ಡಾ. ಉದಯ ಕುಮಾರ ಸರಳತ್ತಾಯರು ತಿಳಿಸಿದ್ದಾರೆ.




By
ForthFocus™