ಉಡುಪಿ, ಮಾ.6: ಯು.ಎಸ್ ನಾಯಕ್ ಪ್ರೌಢ ಶಾಲೆ, ಪಟ್ಲ ಇದರ ನವೀಕೃತ ಸಭಾಭವನದ ಗುದ್ದಲಿ ಪೂಜೆಯನ್ನು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ನೆರವೇರಿಸಿದರು. ಹರಿದಾಸ್ ಭಟ್ ಚಿತ್ರಬೈಲ್, ಶಾಲಾ ಸಂಚಾಲಕರಾದ ನಾರಾಯಣ ಶಣೈ, ಆಡಳಿತ ಮಂಡಳಿ ಸದಸ್ಯರಾದ ಕೇಶವಮೂರ್ತಿ ಬೆಲ್ಪತ್ರೆ, ಪ್ರಕಾಶ್ ನಾಯಕ್, ಗೋಪಿನಾಥ್ ನಾಯಕ್, ಶ್ರೀಕಾಂತ್ ಕಾಮತ್, ರಾಮದಾಸ್ ನಾಯಕ್, ಶ್ರೀಕಾಂತ್ ಪ್ರಭು, ಶಾಲಾ ಮುಖ್ಯೋಪಾಧ್ಯಯರಾದ ಶಾಂತಪ್ಪ ಮೂಲಂಗಿ, ಕಾರ್ಯದರ್ಶಿ ಶ್ರೀಶ ನಾಯಕ್, ಜೊತೆ ಕಾರ್ಯದರ್ಶಿ ಜಯರಾಜ್ ಶೆಟ್ಟಿ, ಶಿಕ್ಷಕರು, ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಯು.ಎಸ್ ನಾಯಕ್ ಪ್ರೌಢಶಾಲೆಯ ಸಭಾಭವನಕ್ಕೆ ಗುದ್ದಲಿ ಪೂಜೆ
ಯು.ಎಸ್ ನಾಯಕ್ ಪ್ರೌಢಶಾಲೆಯ ಸಭಾಭವನಕ್ಕೆ ಗುದ್ದಲಿ ಪೂಜೆ
Date:




By
ForthFocus™