ಕೋಟ, ಮಾ.5: ಹರ್ತಟ್ಟು ಫ್ರೆಂಡ್ಸ್ ಇವರ ವತಿಯಿಂದ ಹರ್ತಟ್ಟು ಪ್ರೀಮಿಯರ್ ಲೀಗ್ ೨೦೨೫ ಕ್ರಿಕೆಟ್ ಪಂದ್ಯಾಕೂಟ ಹರ್ತಟ್ಟು ಪರಿಸರದಲ್ಲಿ ನಡೆಯಿತು. ಕೋಟದ ಪಂಚವರ್ಣ ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ ಉದ್ಘಾಟಿಸಿ ಮಾತನಾಡುತ್ತಾ, ಕ್ರೀಡೆಯ ಮೂಲಕ ಉತ್ತಮ ಆರೋಗ್ಯ ಹಾಗೂ ಸಾಧನೆಗೈಯಲು ಸಾಧ್ಯ. ಯುವ ಸಮುದಾಯ ಕ್ರೀಡೆಯಲ್ಲಿ ಹೆಚ್ಚು ಭಾಗವಹಿಸಿ ದೇಶದ ಕೀರ್ತಿಯನ್ನು ಹೆಚ್ಚಿಸಲಿ ಆ ಮೂಲಕ ಸಮಾಜದಲ್ಲಿ ಗುರುತಿಸಿಕೊಳ್ಳುವಂತಾಗಲಿ ಎಂದರು. ಹರ್ತಟ್ಟು ಭಾಗದ ಹಿರಿಯ ಕೃಷಿಕ ಬಾಬು ಶೆಟ್ಟಿ, ರೈತಧ್ವನಿ ಸಂಘದ ತಿಮ್ಮ ಕಾಂಚನ್, ಸ್ಥಳೀಯರಾದ ದಿನೇಶ್ ಪೂಜಾರಿ ಹರ್ತಟ್ಟು ಪಂದ್ಯಾಟಕ್ಕೆ ಚಾಲನೆ ನೀಡಿದರು. ಸಂತೋಷ್ ಪೂಜಾರಿ ಹಾಗೂ ಬಾಬಣ್ಣ ನಕ್ಷತ್ರಿ ಮುಂತಾದವರು ಉಪಸ್ಥಿತರಿದ್ದರು. ಹರ್ತಟ್ಟು ಫ್ರೆಂಡ್ಸ್ ನ ಪ್ರಮುಖರಾದ ಆದರ್ಶ ಶೆಟ್ಟಿ ಸ್ವಾಗತಿಸಿ, ನಿರೂಪಿಸಿ ವಂದಿಸಿದರು.




By
ForthFocus™