Home ಸುದ್ಧಿಗಳು ಪ್ರಾದೇಶಿಕ ಉಪ್ಪೂರು ಕೆಜಿ ರೋಡ್ ರಾ.ಹೆದ್ದಾರಿ ಮರು ಡಾಮರೀಕರಣ ಶೀಘ್ರ ಪೂರ್ಣಗೊಳಿಸಿ: ಯಶ್ಪಾಲ್ ಸುವರ್ಣ

ಉಪ್ಪೂರು ಕೆಜಿ ರೋಡ್ ರಾ.ಹೆದ್ದಾರಿ ಮರು ಡಾಮರೀಕರಣ ಶೀಘ್ರ ಪೂರ್ಣಗೊಳಿಸಿ: ಯಶ್ಪಾಲ್ ಸುವರ್ಣ

174
0

ಉಡುಪಿ, ಏ.29: ರಾಷ್ಟೀಯ ಹೆದ್ದಾರಿ ಉಪ್ಪೂರು ಕೆಜಿ ರೋಡ್ ಭಾಗದಲ್ಲಿ ಹಲವು ದಿನಗಳಿಂದ ಮರು ಡಾಮರೀಕರಣ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸವಂತೆ ರಾಷ್ಟೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಶಾಸಕ ಯಶ್ಪಾಲ್ ಸುವರ್ಣ ಸೂಚನೆ ನೀಡಿದರು.

ಕೆಜಿ ರೋಡ್ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ, ಸಾರ್ವಜನಿಕರು ದಿನನಿತ್ಯ ಟ್ರಾಫಿಕ್ ಜಾಮ್ ನಿಂದ ಸಮಸ್ಯೆ ಎದುರಿಸುತ್ತಿದ್ದು, ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದ್ದು, ಪೊಲೀಸ್ ಇಲಾಖೆಯ ಸಹಕಾರ ಪಡೆದು ತಕ್ಷಣದಿಂದಲೇ ರಾತ್ರಿ ಹಗಲು ಕೆಲಸ ನಡೆಸಿ 3 ದಿನದೊಳಗೆ ಪೂರ್ಣಗೊಳಿಸುವಂತೆ ತಿಳಿಸಿದರು. ರಾಷ್ಟೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಗುತ್ತಿಗೆದಾರ ಕಂಪೆನಿಯ ಪ್ರತಿನಿಧಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.