Home ಸುದ್ಧಿಗಳು ಪ್ರಾದೇಶಿಕ ಕೊಡವೂರು ದೇವಳಕ್ಕೆ ಬೆಳ್ಳಿ ಆರತಿ ಸಮರ್ಪಣೆ

ಕೊಡವೂರು ದೇವಳಕ್ಕೆ ಬೆಳ್ಳಿ ಆರತಿ ಸಮರ್ಪಣೆ

316
0

ಕೊಡವೂರು: ಕೊಡವೂರಿನ ಮಹತೋಬಾರ ಶ್ರೀ ಶಂಕರನಾರಾಯಣ ದೇವಸ್ಥಾನಲ್ಲಿ ವಿಜಯದಶಮಿಯ ಪರ್ವ ಕಾಲದಲ್ಲಿ ದೇವರಿಗೆ ಸುಮಾರು ಒಂದು ಲಕ್ಷ ಎಪ್ಪತ್ತೈದು ಸಾವಿರ ರೂ. ಮೌಲ್ಯದ ಬೆಳ್ಳಿಯ ಆರತಿಗಳನ್ನು ಭಕ್ತರಾದ ಲಕ್ಷ್ಮೀನಾರಾಯಣ ಭಟ್ ಅಗ್ರಹಾರ ಮತ್ತು ಮನೆಯವರು, ಶ್ರೀನಿವಾಸ ಬಾಯರಿ ಮತ್ತು ಮನೆಯವರು ಹಾಗೂ ಶೇಷಾದ್ರಿ ಬೆಂಗಳೂರು ಇವರುಗಳು ಒಟ್ಟಾಗಿ ನೀಡಿದರು.

ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಸಾಧು ಸಾಲ್ಯಾನ್ ದೇವಳದ ಪರವಾಗಿ ಸ್ವೀಕರಿಸಿದರು. ದೇವಳದ ತಂತ್ರಿಗಳಾದ ಪುತ್ತೂರು ಹಯವದನ ತಂತ್ರಿಗಳು ಪ್ರಾರ್ಥನೆ ನೆರವೇರಿಸಿದರು. ವ್ಯವಸ್ಥಾಪನಾ ಸಮಿತಿಯ ಸದಸ್ಯರು ಮತ್ತು ಅರ್ಚಕರಾದ ಪ್ರಸಾದ ಭಟ್, ಸುಧೀರ್ ರಾವ್ ಕೊಡವೂರು, ಪೂರ್ಣಿಮಾ ಜನಾರ್ದನ್, ದಾನಿಗಳಾದ ಶ್ರೀನಿವಾಸ ಬಾಯರಿ ಮತ್ತು ಲೆಕ್ಕಪರಿಶೋಧಕರಾದ ಉಮೇಶ್ ರಾವ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.