ಮಂಗಳೂರು, ಡಿ.15: ಸಿಒಡಿಪಿ (ರಿ) ಮಂಗಳೂರು ಇದರ ನೇತೃತ್ವದಲ್ಲಿ ಕಾರಿತಾಸ್ ಇಂಡಿಯಾ, ನವದೆಹಲಿ ಇದರ ಸಹಯೋಗದೊಂದಿಗೆ ಪರಿವರ್ತನ್ ಚಾರಿಟೇಬಲ್ ಟ್ರಸ್ಟ್ ಇದರ ಸಹಕಾರದೊಂದಿಗೆ ಮಂಗಳಮುಖಿಯರಿಗೆ ಚಿಂತನ-ಮಂಥನ ಕ್ರಿಸ್ಮಸ್ ಸೌಹಾರ್ದ ಕಾರ್ಯಕ್ರಮ ಭಾನುವಾರ ಸಿಒಡಿಪಿ ಮದರ್ ತೆರೆಸಾ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು. ಮುಖ್ಯ ಅಥಿತಿಗಳಾಗಿ ಕಣಚೂರು ಆಸ್ಪತ್ರೆ ದೇರಳಕಟ್ಟೆ ಮುಖ್ಯ ಆಡಳಿತ ಅಧಿಕಾರಿ ಡಾ. ರೋಹನ್ ಎಸ್ ಮೋನಿಸ್, ಕಾರಿತಾಸ್ ಇಂಡಿಯಾ ರಾಜ್ಯ ಪ್ರತಿನಿಧಿ ರೋಬರ್ಟ್ ಡಿ ಸೋಜ, ಸಿಒಡಿಪಿ ಸಂಸ್ಥೆಯ ನಿರ್ದೇಶಕರಾದ ಫಾ. ವಿನ್ಸೆಂಟ್ ಡಿ ಸೋಜ ಮತ್ತು ಕೆನರಾ ಕಮ್ಯೂನಿಕೇಷನ್ ಸೆಂಟರ್ ಮಂಗಳೂರು ಇದರ ನಿರ್ದೇಶಕರಾದ ಫಾ. ಅನಿಲ್ ಐವನ್ ಫೆರ್ನಾಂಡಿಸ್ರವರು ಮತ್ತು ಫಾ. ಲೋರೆನ್ಸ್ ಸಿಒಡಿಪಿ ಸಹ ನಿರ್ದೇಶಕರು ಉಪಸ್ಥಿತರಿದ್ದರು.
ಮುಖ್ಯ ಅತಿಥಿ ಡಾ. ರೋಹನ್ರವರು ಆರೋಗ್ಯ ಕ್ಷೇತ್ರದಲ್ಲಿ ಸಿಒಡಿಪಿ ಮುಖಾಂತರ ನೀಡುವ ಸೌವಲತ್ತುಗಳ ಬಗ್ಗೆ ವಿವರಿಸಿದರು. ಕಾರ್ಯಕ್ರಮವನ್ನು ರೋಬರ್ಟ್ರವರು ನಿರೂಪಿಸಿ, ಅತಿಥಿಗಳನ್ನು ಸಿಒಡಿಪಿ ನಿರ್ದೇಶಕರು ಸ್ವಾಗತಿಸಿದರು. ಕ್ರಿಸ್ಮಸ್ ಸಮಾರಂಭದ ಶುಭಾಶಯಗಳನ್ನು ಸಿಒಡಿಪಿ ನಿರ್ದೇಶಕರು ಕೋರಿದರು, ಕೇಕ್ ಹಾಗೂ ಲಘುಪಾನಿಯ ವಿತರಿಸಿದರು. ಕಾರ್ಯಕ್ರಮದ ಕೊನೆಗೆ ಔತಣ ಕೂಟ ಏರ್ಪಡಿಸಲಾಯಿತ್ತು.




By
ForthFocus™