Home ಸುದ್ಧಿಗಳು ಪ್ರಾದೇಶಿಕ ಡಾ. ಪಿ. ದಯಾನಂದ ಪೈ-ಪಿ. ಸತೀಶ ಪೈ ಸ.ಪ್ರ.ದ.ಕಾಲೇಜು: ಶಿಕ್ಷಕರ ಸಮ್ಮೇಳನ

ಡಾ. ಪಿ. ದಯಾನಂದ ಪೈ-ಪಿ. ಸತೀಶ ಪೈ ಸ.ಪ್ರ.ದ.ಕಾಲೇಜು: ಶಿಕ್ಷಕರ ಸಮ್ಮೇಳನ

286
0

ಮಂಗಳೂರು, ಸೆ. 2: ಡಾ. ಪಿ. ದಯಾನಂದ ಪೈ-ಪಿ. ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ರಥಬೀದಿ ಮಂಗಳೂರು ಇಲ್ಲಿ ಭಾರತೀಯ ಕಂಪೆನಿ ಸೆಕ್ರೆಟರಿಗಳ ಸಂಸ್ಥೆಯ ಮಂಗಳೂರು ವಿಭಾಗದ ವತಿಯಿಂದ ಮಂಗಳೂರು ವಿವಿ ವ್ಯಾಪ್ತಿಯ ವಾಣಿಜ್ಯ, ನಿರ್ವಹಣೆ ಹಾಗೂ ಕಾನೂನು ವಿಭಾಗಗಳ ಉಪ್ಯಾಸಕರಿಗೆ ಒಂದು ದಿನದ ಶಿಕ್ಷಕರ ಸಮ್ಮೇಳನ ನಡೆಯಿತು. ಕಾಲೇಜು ಶಿಕ್ಷಣ ಇಲಾಖೆಯ ಮಂಗಳೂರು ಪ್ರಾದೇಶಿಕ ಕಛೇರಿಯ ಜಂಟಿ ನಿರ್ದೇಶಕರಾದ ಪ್ರೊ. ರಾಮೆ ಗೌಡ ಸಮ್ಮೇಳನವನ್ನು ಉದ್ಘಾಟಿಸಿದರು. ಪ್ರಾಂಶುಪಾಲ ಪ್ರೊ. ಜಯಕರ ಭಂಡಾರಿ ಎಂ ಅಧ್ಯಕ್ಷತೆ ವಹಿಸಿದ್ದರು.

ವಾಣಿಜ್ಯ ವಿಭಾಗದ ಮುಖ್ಯಸ್ಥೆ ಸುವರ್ಣಮಾಲಿನಿ, ಆಂತರಿಕ ಗುಣಮಟ್ಟ ಭರವಸಾ ಕೋಶದ ಸಹ ಸಂಚಾಲಕರಾದ ಡಾ. ಜ್ಯೋತಿಪ್ರಿಯ, ಪ್ರಾಧ್ಯಾಪಕರಾದ ಡಾ. ವಸಂತಿ ಪಿ ಹಾಗೂ ಡಾ. ನಾಗಪ್ಪ ಗೌಡ ಕೆ ಉಪಸ್ಥಿತರಿದ್ದರು. ಸಿ.ಎಸ್ ಚೇತನ್ ನಾಯಕ್ ಇವರು ಕಂಪೆನಿ ನಿಯಮಗಳ ಇತ್ತೀಚೆಗಿನ ತಿದ್ದುಪಡಿಗಳು ಹಾಗೂ ಕಂಪೆನಿ ಸೆಕ್ರೆಟರಿಗಳಿಗೆ ಉದ್ಯೋಗಾವಕಾಶದ ಬಗ್ಗೆ ಹಾಗೂ ಡಾ. ದೇವಿಪ್ರಭಾ ಆಳ್ವ ಇವರು ಡಿಜಿಟಲ್ ಜಗತ್ತಿನಲ್ಲಿ ಶಿಕ್ಷಕರ ಪ್ರಸ್ತುತತೆ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದರು.

ಮಂಗಳೂರು ವಿವಿ ವ್ಯಾಪ್ತಿಯ 70 ಉಪನ್ಯಾಸಕರು ಭಾಗವಹಿಸಿದರು. ಭಾರತೀಯ ಕಂಪೆನಿ ಸೆಕ್ರೆಟರಿಗಳ ಸಂಸ್ಥೆಯ ಮಂಗಳೂರು ವಿಭಾಗದ ಅಧ್ಯಕ್ಷೆ ಸೋನಾಲಿ ಸುರೇಶ್ ಮಲ್ಯ ಸ್ವಾಗತಿಸಿದರು. ಕಾಶಿಇ ಪ್ರಾದೇಶಿಕ ಕಛೇರಿಯ ವಿಶೇಷಾಧಿಕಾರಿ ಹಾಗೂ ಕಾಲೇಜಿನ ಆಂತರಿಕ ಗುಣಮಟ್ಟ ಭರವಸಾ ಕೋಶದ ಸಂಯೋಜಕರಾದ ದೇವಿಪ್ರಸಾದ್ ವಂದಿಸಿದರು. ವ್ಯವಹಾರ ಆಡಳಿತ ವಿಭಾಗದ ಮುಖ್ಯಸ್ಥೆ ಡಾ. ಮಾಲತಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.