Home ಸುದ್ಧಿಗಳು ರಾಷ್ಟ್ರೀಯ ಪಂಡರಾಪುರ ವಿಠೋಭ ದೇವಸ್ಥಾನಕ್ಕೆ ಕಾಶೀ ಶ್ರೀ ಭೇಟಿ

ಪಂಡರಾಪುರ ವಿಠೋಭ ದೇವಸ್ಥಾನಕ್ಕೆ ಕಾಶೀ ಶ್ರೀ ಭೇಟಿ

577
0

ಪಂಡರಾಪುರ, ಮಾ. 12: ಮಹಾರಾಷ್ಟ್ರದ ಪಂಡರಾಪುರದಲ್ಲಿರುವ ಪುರಾಣ ಪ್ರಸಿದ್ಧ ಶ್ರೀ ವಿಠೋಭ ದೇವಸ್ಥಾನಕ್ಕೆ ಕಾಶೀ ಮಠಾಧೀಶರಾದ ಪರಮಪೂಜ್ಯ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ಭೇಟಿ ನೀಡಿದರು.
ದೇವಳದ ಶಿಷ್ಟಾಚಾರದಂತೆ ಸ್ವಾಮೀಜಿಯವರನ್ನು ಸ್ವಾಗತಿಸಲಾಯಿತು. ಸ್ವಾಮೀಜಿಯವರ ಸಮ್ಮುಖದಲ್ಲಿ ಶ್ರೀ ವಿಠೋಭ ದೇವರಿಗೆ ದೇವಳದ ಅರ್ಚಕ ವೃಂದದಿಂದ ವಿಶೇಷ ಅಲಂಕಾರ ಮಾಡಲಾಯಿತು. ಶ್ರೀಗಳು ಕಾಶೀಮಠ ಸಂಸ್ಥಾನದ ಆರಾಧ್ಯ ದೇವರಾದ ವ್ಯಾಸ ರಘುಪತಿಯ ಚಿತ್ರವಿರುವ ಸ್ವರ್ಣಹಾರವನ್ನು ಶ್ರೀ ವಿಠೋಭ ದೇವರಿಗೆ ಅರ್ಪಿಸಿದರು.

ಈ ಸಂದರ್ಭದಲ್ಲಿ ಸುಕೃತೀಂದ್ರ ಸ್ವಾಮಿ ಸೇವಾ ಪ್ರತಿಷ್ಠಾನದ ಅಧ್ಯಕ್ಷ ರಘುವೀರ್ ಭಂಡಾರಕಾರ್, ಪ್ರಮುಖರಾದ ಗುರುಪ್ರಸಾದ್ ಕಾಮತ್ ಕಾನೆಗಾಡ್, ರಾಘವೇಂದ್ರ ಭಕ್ತ, ವಿಶ್ವನಾಥ ಭಟ್ ಪಂಡರಾಪುರ ಬ್ಯಾಂಕಿನ ಸಿಇಒ ಉಮೇಶ್ ವಿರ್ದೆ, ಕೊಚ್ಚಿ ನವೀನ್ ಕಾಮತ್ ಹಾಗೂ ಕಾಶೀಮಠದ ನೂರಾರು ಭಕ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.