ನವದೆಹಲಿ, ಫೆ.3: ಸಭಾಪತಿ ದಿಲೀಪ್ ಸೈಕಿಯಾ ಅವರು ಕಾಂಗ್ರೆಸ್ ಸಂಸದರಾದ ಅಮರಿಂದರ್ ಸಿಂಗ್ ರಾಜಾ ವಾರಿಂಗ್, ಗುರುದೀಪ್ ಸಿಂಗ್ ಔಜ್ಲಾ, ಹಿಬಿ ಈಡನ್, ಡೀನ್ ಕುರಿಯಾಕೋಸ್, ಪ್ರಶಾಂತ್ ಪಡೋಲೆ, ಕಿರಣ್ ಕುಮಾರ್ ರೆಡ್ಡಿ, ಎಸ್ ವೆಂಕಟರಾಮನ್ ಮತ್ತು ಮಾಣಿಕ್ಕಮ್ ಟ್ಯಾಗೋರ್ ಅವರನ್ನು ಘೋಷಣೆ ಕೂಗಿದಕ್ಕಾಗಿ ಮತ್ತು ಕಾಗದ ಹರಿದು ಚೆಲ್ಲಿದಕ್ಕಾಗಿ ಅಮಾನತುಗೊಳಿಸಲಾಗಿದೆ. ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಸದಸ್ಯರನ್ನು ಪಟ್ಟಿ ಮಾಡಿ, ಅಧಿವೇಶನದ ಉಳಿದ ಅವಧಿಗೆ ಅವರನ್ನು ಅಮಾನತುಗೊಳಿಸಲು ಮುಂದಾದರು. ಇದನ್ನು ಧ್ವನಿ ಮತದ ಮೂಲಕ ಅಂಗೀಕರಿಸಲಾಯಿತು ಮತ್ತು ಲೋಕಸಭೆಯನ್ನು ಬುಧವಾರ ಬೆಳಿಗ್ಗೆ 11 ಗಂಟೆಗೆ ಮುಂದೂಡಲಾಯಿತು.
ಘೋಷಣೆ ಕೂಗಿದ್ದಕ್ಕಾಗಿ ಎಂಟು ಕಾಂಗ್ರೆಸ್ ಲೋಕಸಭಾ ಸಂಸದರು ಅಮಾನತು
ಘೋಷಣೆ ಕೂಗಿದ್ದಕ್ಕಾಗಿ ಎಂಟು ಕಾಂಗ್ರೆಸ್ ಲೋಕಸಭಾ ಸಂಸದರು ಅಮಾನತು
Date:




By
ForthFocus™