Home ಸುದ್ಧಿಗಳು ಪ್ರಾದೇಶಿಕ ಕಾರಂತರ ಹೆಜ್ಜೆಗುರುತು ಶಾಶ್ವತ: ಎ.ಎಸ್.ಎನ್ ಹೆಬ್ಬಾರ್

ಕಾರಂತರ ಹೆಜ್ಜೆಗುರುತು ಶಾಶ್ವತ: ಎ.ಎಸ್.ಎನ್ ಹೆಬ್ಬಾರ್

379
0

ಕೋಟ: ಕಾರಂತರು ಬದುಕಿದ ರೀತಿ, ಅವರು ಜೀವಿತಾವಧಿ ನಂತರ ಬಿಟ್ಟು ಹೋದ ಹೆಜ್ಜೆ ಗುರುತುಗಳು ಮುಂದಿನ ಜನಾಂಗಕ್ಕೆ ದಾರಿ ದೀಪವಾಗಲಿ. ಅವರ ನೆನಪು ಶಾಶ್ವತವಾಗುವ ನಿಟ್ಟಿನಲ್ಲಿ ಕೋಟದ ಕಾರಂತ ಥೀಮ್ ಪಾರ್ಕ್
ಸ್ಥಾಪನೆಯ ಉದ್ದೇಶ ಸಾಕಾರಗೊಳ್ಳುತ್ತಿರುವುದು ಸಂಭ್ರಮದ ವಿಷಯ ಎಂದು ಹಿರಿಯ ಸಾಹಿತಿ ಎ. ಎಸ್. ಎನ್ ಹೆಬ್ಬಾರ್ ಅವರು ಹೇಳಿದರು.

ಅವರು ಕೋಟತಟ್ಟು ಗ್ರಾಮ ಪಂಚಾಯತ್, ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ (ರಿ.) ಕೋಟ, ಡಾ. ಶಿವರಾಮ ಕಾರಂತ ಟ್ರಸ್ಟ್(ರಿ.) ಉಡುಪಿ ಸಹಯೋಗದಲ್ಲಿ ಡಾ. ಶಿವರಾಮ ಕಾರಂತ ಜನ್ಮದಿನೋತ್ಸವ ಹಾಗೂ ಹುಟ್ಟೂರ ಪ್ರಶಸ್ತಿಗೆ 17 ನೇ ವರುಷದ ಸಂಭ್ರಮದ ಸಾಹಿತ್ಯಕ – ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿತ-2021 (ಎಣೆಯಿಲ್ಲದ ಚಕಿತ) ಕಾರ್ಯಕ್ರಮದಲ್ಲಿ ನುಡಿ ಚೇತನದಲ್ಲಿ ಕಾರಂತರ ಕೊನೆಯ ದಿನಗಳ ಬಗ್ಗೆ ಮೆಲುಕು ಹಾಕಿ ಮಾತನಾಡುತ್ತಿದ್ದರು.

ಕಾರಂತ ಸಮಾಧಿ ನಿರ್ಮಾಣವಾಗಲಿ, ಕಾರಂತರು ನಮ್ಮೊಳಗಿನ ಮಹಾನ್ ಚೈತನ್ಯ ಅವರ ಅಂತ್ಯ ಸಂಸ್ಕಾರವಾದ ಸ್ಥಳದಲ್ಲಿ ಸಮಾಧಿ ನಿರ್ಮಾಣವಾಗಿ ಕಾರಂತ ಅಭಿಮಾನಿ-ಸಾಹಿತ್ಯ ಪ್ರೇಮಿಗಳಿಗೆ ನೋಡುವ ಭಾಗ್ಯ ಸಿಗಲಿ ಎಂದು ಹೆಬ್ಬಾರರು ಹೇಳಿದರು.

ಕಾರ್ಯಕ್ರಮವನ್ನು ಕಾರಂತ ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಅವರು ನಿರೂಪಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.