Home ಸುದ್ಧಿಗಳು ಪ್ರಾದೇಶಿಕ ಬೆಳ್ಮಣ್: ಎಸ್.ಎಂ. ಟೈಲ್ಸ್ & ಗ್ರಾನೈಟ್ ಶೋರೂಮ್ ಉದ್ಘಾಟನೆ

ಬೆಳ್ಮಣ್: ಎಸ್.ಎಂ. ಟೈಲ್ಸ್ & ಗ್ರಾನೈಟ್ ಶೋರೂಮ್ ಉದ್ಘಾಟನೆ

464
0

ಬೆಳ್ಮಣ್: ಬೆಳ್ಮಣ್ಣು ಶ್ರೀ ಕೃಷ್ಣ ಕಾಂಪ್ಲೆಕ್ಸ್ ನಲ್ಲಿರುವ ಎಸ್.ಎಂ. ಟೈಲ್ಸ್ ಗ್ರಾನೈಟ್‌ನ ನವೀಕೃತ ಶೋರೂಮ್ ಸೋಮವಾರ ಉದ್ಘಾಟನೆಗೊಂಡಿತು. ಬೆಳ್ಮಣ್ಣು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರರು, ಖ್ಯಾತ ಜ್ಯೋತಿಷ್ಯರಾದ ವೇದಮೂರ್ತಿ ಬಿ.ಕೆ. ವಿಘ್ನೇಶ್ ಭಟ್ ಅವರು ನವೀಕೃತ ಶೊರೋಮ್‌ನ್ನು ಉದ್ಘಾಟಿಸಿ ಅರ್ಶೀವಚನ ನೀಡಿದರು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿದ್ದ ಕುತ್ಯಾರು ಸೃಷ್ಠಿ ಎಸೋಸಿಯೇಟ್‌ನ್ ಪ್ರಸಾದ್ ಶೆಟ್ಟಿ ಶುಭ ಹಾರೈಸಿದರು.

ಬೆಳ್ಮಣ್ಣು ಎಸ್.ಎಂ. ಟೈಲ್ಸ್ ಗ್ರಾನೈಟ್‌ನ ಮಾಲಕ ರಮೇಶ್ ಕುಮಾರ್, ಬೆಳ್ಮಣ್ಣು ಶ್ರೀ ಕೃಷ್ಣ ಗ್ರೂಪ್‌ನ ಮಾಲಕ ಎಸ್.ಕೆ.ಸಾಲ್ಯಾನ್, ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ರವೀಂದ್ರ ಶೆಟ್ಟಿ, ಕಾರ್ಕಳ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಬೋಳ ಜಯರಾಮ್ ಸಾಲ್ಯಾನ್, ಬೋಳ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಬೋಳ ಸತೀಶ್ ಪೂಜಾರಿ, ಬೆಳ್ಮಣ್ಣು ನಮ್ಮನೆ ಕ್ಯಾಟರ್ಸ್ ಮಾಲಕ ಸತೀಶ್ ಎರ್ಮಾಳ್ ಮೊದಲಾದವರಿದ್ದರು.

ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್‌ ಸಂಚಾಲಕ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.