Home ಸುದ್ಧಿಗಳು ಪ್ರಾದೇಶಿಕ ಮಹಿಳಾ ದೌರ್ಜನ್ಯ ತಡೆ ಮಾಹಿತಿ ಕಾರ್ಯಕ್ರಮ

ಮಹಿಳಾ ದೌರ್ಜನ್ಯ ತಡೆ ಮಾಹಿತಿ ಕಾರ್ಯಕ್ರಮ

378
0

ಮಲ್ಪೆ: ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ, ರಾಷ್ಟ್ರ‍ೀಯ ಸೇವಾ ಯೋಜನೆ, ಗೊರೆಟ್ಟಿ ಆಸ್ಪತ್ರೆ ಕಲ್ಯಾಣಪುರ ಮತ್ತು ಫೆಡರೇಶನ್ ಆಫ್ ಆಬ್ಸಿಟ್ರಿಕ್ ಆ್ಯಂಡ್ ಗೈನಕಲಾಜಿಕಲ್ ಸೊಸೈಟಿ ಆಫ್ ಇಂಡಿಯಾ, ಮಣಿಒಪಾಲರ ಘಟಕಗಳ ಸಹಯೋಗದಲ್ಲಿ “ಧೀರ – ಮಹಿಳಾ ದೌರ್ಜನ್ಯ ತಡೆ ಮಾಹಿತಿ ಕಾರ್ಯಕ್ರಮ ನಡೆಯಿತು.

ಸಂಪನ್ಮೂಲ ವ್ಯಕ್ತಿಗಳಾಗಿ ಸ್ತ್ರೀ ರೋಗ ತಜ್ಷರು ಮತ್ತು ಧೀರ ತರಬೇತುದಾರರಾದ ಡಾ. ರಾಜಲಕ್ಷ್ಮೀ ಭಾಗಹಿಸಿ ಮಹಿಳಾ ದೌರ್ಜನ್ಯವು ಸರ್ವ ವ್ಯಾಪಕವಾಗಿದ್ದು, ಧೀರ ಯೋಜನೆಯು ಮಹಿಳಾ ದೌರ್ಜನ್ಯದ ವಿರುದ್ಧ ಧೈರ್ಯದಿಂದ ಹೋರಾಡುವುದಾಗಿದೆ. ಈ ಬಗ್ಗೆ ಅರಿವು ಮೂಡಿಸಿಕೊಂಡು ಶೋಷಣೆಯ ಪ್ರಮಾಣವನ್ನು ತಡೆಯಬಹುದಾಗಿದೆ ಅಥವಾ ಕಡಿಮೆ ಮಾಡಬಹುದಾಗಿದೆ. ವಿದ್ಯಾರ್ಥಿಗಳು ಇದರ ಬಗ್ಗೆ ಅರಿವು ಮೂಡಿಸಿಕೊಂಡು ಈ ಮಾಹಿತಿಯನ್ನು ಸಮಾಜದೆಲ್ಲೆಡೆ ಹರಡಬೇಕಾಗಿದೆ ಎಂದರು.

ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ಡಾ. ಜಯಪ್ರಕಾಶ್ ಶೆಟ್ಟಿ ಹೆಚ್ ಮಾತನಾಡಿ, “ಮಹಿಳಾ ವಿರುದ್ಧದ ದೌರ್ಜನ್ಯಕ್ಕೆ ಇತ್ತೀಚೆಗೆ ಹೊಸ ಹೊಸ ಸ್ವರೂಪಗಳು ಸೇರಿಕೊಳ್ಳುತ್ತಿದೆ. ಸುಶಿಕ್ಷಿತ ವಲಯಗಳಲ್ಲಿಯೇ ನೀತಿ ನಿಯಮಗಳ ಹೆಸರಿನಲ್ಲಿ ಮಹಿಳಾ ದೌರ್ಜನ್ಯಗಳಾಗುತ್ತಿರುವುದು ಖೇದಕರ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿದರು.

ಗೊರೆಟ್ಟಿ ಆಸ್ಪತ್ರೆಯ ಸಮಾಜಕಾರ್ಯ ವಿಭಾಗದ ಸಂಯೋಜಕ ರಾಕೇಶ್ ಹಾಗೂ ಕಾಲೇಜಿನ ಐ.ಕ್ಯೂ.ಎ.ಸಿ. ಸಂಚಾಲಕಿ ಡಾ. ಮೇವಿ ಮಿರಾಂದ ಉಪಸ್ಥಿತರಿದ್ದರು. ಎನ್.ಎಸ್.ಎಸ್. ಯೋಜನಾಧಿಕಾರಿ ಸುಷ್ಮಾ ಟಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಶಾಂತಿ ಸ್ವಾಗಿಸಿ, ಸಜನಿ ನಿರೂಪಿಸಿದರು. ಎನ್.ಎಸ್.ಎಸ್. ಯೋಜನಾಧಿಕಾರಿ ಡಾ. ಮಹೇಶ್ ಕುಮಾರ್ ಕೆ.ಇ. ವಂದಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.