Home ಸುದ್ಧಿಗಳು ಪ್ರಾದೇಶಿಕ ಅಲಂಕಾರ್ ಚಿತ್ರಮಂದಿರದ ಎದುರು ಮೃತ್ಯು ಕೂಪ

ಅಲಂಕಾರ್ ಚಿತ್ರಮಂದಿರದ ಎದುರು ಮೃತ್ಯು ಕೂಪ

561
0

ಉಡುಪಿ: ಕವಿ ಮುದ್ದಣ ಮಾರ್ಗ ಇಲ್ಲಿಯ ಅಲಂಕಾರ್ ಚಿತ್ರ ಮಂದಿರದ ಎದುರಿನಲ್ಲಿ ಆಳದ ಕಂದಕ ಇದ್ದು, ಮೃತ್ಯು ಕೂಪವಾಗಿ ಮಾರ್ಪಟ್ಟಿದೆ. ಇಲ್ಲಿ ಪಾದಚಾರಿಗಳು ಬಿದ್ದು ಗಾಯಗೊಂಡಿರುವ ಘಟನೆಗಳು ಬಹಳಷ್ಟು ನಡೆದಿವೆ. ವಾಹನಗಳು ಹೊಂಡದಲ್ಲಿ ಸಿಲುಕಿಕೊಂಡು ಘಾಸಿಗೊಂಡಿವೆ.

ಸಾರ್ವಜನಿಕರು, ಹಿರಿಯ ನಾಗರಿಕರು, ವಿದ್ಯಾರ್ಥಿಗಳು, ಸಿನೆಮಾ ವೀಕ್ಷಕರು, ಆಸ್ಪತ್ರೆಗೆ ತೆರಳುವ ರೋಗಿಗಳು ಇಲ್ಲಿ ಬಹಳವಾಗಿ ಸಂಚರಿಸುತ್ತಿರುತ್ತಾರೆ. ನಗರಸಭೆಯವರು ತಕ್ಷಣ ಕಂದಕಕ್ಕೆ ಚಪ್ಪಡಿ ಅಳವಡಿಸಬೇಕೆಂದು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಆಗ್ರಹಪಡಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.