ಉಡುಪಿ, ಮಾ.27: ಶ್ರೀ ವಿಶ್ವಪ್ರಸನ್ನತೀರ್ಥರ ಆಶೀರ್ವಾದದೊಂದಿಗೆ ಶ್ರೀ ಕೃಷ್ಣ ಬಾಲನಿಕೇತನದಲ್ಲಿ ರಾಮನವಮಿಯನ್ನು ವಿಜ್ರಂಭಣೆಯಿಂದ ಆಚರಿಸಲಾಯಿತು. ಬಾಲನಿಕೇತನದ ಮಕ್ಕಳು ಭಜನೆ, ರಾಮರಕ್ಷಾ ಸ್ತೋತ್ರ, ಹನುಮಾನ್ ಚಾಲೀಸ ಮತ್ತು ರಾಮನಾಮ ಜಪ ಮಾಡಿದರು. ನಂತರ ಪೂರ್ಣಪ್ರಜ್ಞ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥರು ಮತ್ತು ಸ್ವಾಯತ್ತ ಕಾಲೇಜಿನ ಪರೀಕ್ಷಾ ವಿಭಾಗದ ರಿಜಿಸ್ಟ್ರಾರ್ ಡಾ. ಟಿ.ಎಸ್. ರಮೇಶ್ ಅವರು ರಾಮಾಯಣದ ಬಗ್ಗೆ ಮತ್ತು ರಾಮನ ಆದರ್ಶ ಗುಣಗಳ ಬಗ್ಗೆ ಪ್ರವಚನ ನೀಡಿದರು. ಬಾಲನಿಕೇತನದ ಆಡಳಿತ ಮಂಡಳಿ ಸದಸ್ಯರು, ರೋಟರಿ ಸದಸ್ಯರು ಮತ್ತು ಅಭಿಮಾನಿಗಳು ಭಾಗವಹಿಸಿದ್ದರು. ರಾಮದೇವರ ಪೂಜೆ ಮತ್ತು ಫಲಹಾರದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.
ಶ್ರೀಕೃಷ್ಣ ಬಾಲನಿಕೇತನದಲ್ಲಿ ರಾಮನವಮಿ ಆಚರಣೆ
ಶ್ರೀಕೃಷ್ಣ ಬಾಲನಿಕೇತನದಲ್ಲಿ ರಾಮನವಮಿ ಆಚರಣೆ
Date:




By
ForthFocus™