Saturday, January 31, 2026
Saturday, January 31, 2026

ಮುಖ್ಯ ಕಾರ್ಯಾಚರಣಾ ಅಧಿಕಾರಿ ಭೇಟಿ

ಮುಖ್ಯ ಕಾರ್ಯಾಚರಣಾ ಅಧಿಕಾರಿ ಭೇಟಿ

Date:

ಉಡುಪಿ, ಜ.31: ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ ಬೆಂಗಳೂರು ಇದರ ಮುಖ್ಯ ಕಾರ್ಯಾಚರಣಾ ಅಧಿಕಾರಿ (ಕೌಶಲ್ಯ) ಕಾತ್ಯಾಯಿನಿ ದೇವಿ ಕೆ.ಎ.ಎಸ್ ಇವರು ಬ್ರಹ್ಮಾವರ ತಾಲೂಕಿನ ರುಡ್ಸೆಟ್ ತರಬೇತಿ ಸಂಸ್ಥೆಗೆ ಭೇಟಿ ನೀಡಿದರು. ತರಬೇತಿಗಳ ಶಿಬಿರಾರ್ಥಿಗಳೊಂದಿಗೆ ತರಬೇತಿಯ ಬಗ್ಗೆ ಚರ್ಚೆ ನಡೆಸಿ ಸೌಲಭ್ಯಗಳ ಬಗ್ಗೆ ವಿಚಾರಿಸಿದರು ನಂತರ ನಿರ್ದೇಶಕರು ಹಾಗೂ ಉಪನ್ಯಾಸಕರೊಂದಿಗೆ ಸಭೆ ನಡೆಸಿ ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಕೈಗೊಳ್ಳುವ ವಿವಿಧ ವೃತ್ತಿ ತರಬೇತಿಯ ಬಗ್ಗೆ ಹಾಗೂ ನಿಗದಿತ ಗುರಿ ಸಾಧನೆ ಬಗ್ಗೆ ಸೂಕ್ತ ಮಾರ್ಗದರ್ಶನ ನೀಡಿದರು.

ಸಂಸ್ಥೆಯ ನಿರ್ದೇಶಕರಾದ ಡಾ.ಬೊಮ್ಮಯ್ಯ, ಉಪನ್ಯಾಸಕರಾದ ಸಂತೋಷ್, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರಾದ ನವ್ಯ, ಜಿಲ್ಲಾ ವ್ಯವಸ್ಥಾಪಕರಾದ ಅವಿನಾಶ್ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾ ವ್ಯವಸ್ಥಾಪಕರಾದ ಶಕುಂತಲಾ ಉಪಸ್ಥಿತರಿದ್ದರು. ನಂತರ ಉಡುಪಿ ತಾಲೂಕಿನ ಸಂಜೀವಿನಿ ಸೂಪರ್ ಮಾರ್ಕೆಟ್ ಗೆ ಭೇಟಿ ನೀಡಿ ಸಂಜೀವಿನಿ ಮಹಿಳೆಯರು ತಯಾರಿಸುತ್ತಿರುವ ಉತ್ಪನ್ನಗಳನ್ನು ಪರಿಶೀಲಿಸಿ ಮಾರುಕಟ್ಟೆ ವ್ಯವಸ್ಥೆಯ ಅಭಿವೃದ್ಧಿ ಬಗ್ಗೆ ಸೂಕ್ತ ಮಾರ್ಗದರ್ಶನ ಹಾಗೂ ಸಲಹೆ ನೀಡಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಹಾರಾಷ್ಟ್ರದ ಮೊದಲ ಮಹಿಳಾ ಉಪಮುಖ್ಯಮಂತ್ರಿ ಸುನೇತ್ರಾ ಪವಾರ್ ಶನಿವಾರ ಸಂಜೆ ಪ್ರಮಾಣ?

ಮುಂಬಯಿ, ಜ.31: ವಿಮಾನ ಅವಘಡದಲ್ಲಿ ಸಾವನ್ನಪ್ಪಿದ ಮಾಹರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್...

ಎಲ್.ವಿ.ಟಿ. ನಾಗಬನ ರಸ್ತೆ: ಸ್ವಚ್ಛತಾ ಕಾರ್ಯಕ್ರಮ

ಉಡುಪಿ, ಜ.31: ಉಡುಪಿಯ ರಾಷ್ಟ್ರೀಯ ಹೆದ್ದಾರಿಯ ಎಲ್.ವಿ.ಟಿ. ನಾಗಬನ ರಸ್ತೆಯ ಸುಮಾರು...

ರಾಷ್ಟ್ರಮಟ್ಟದ ಅಬಾಕಸ್: ಸದ್ವಿನ್ ಎಸ್ ಆಚಾರ್ಯಗೆ ಪ್ರಥಮ ಸ್ಥಾನ

ಉಡುಪಿ, ಜ.31: ಐಡಿಯಲ್ ಪ್ಲೇ ಅಬಾಕಸ್ ಇಂಡಿಯಾ ಪ್ರೈ ಲಿ. ಆಯೋಜಿಸಿದ್ದ...

ಶಿವಪಾಡಿ ವೈಭವ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿಯವರಿಗೆ ಆಹ್ವಾನ

ಮಣಿಪಾಲ, ಜ.31: ಫೆ. 14 ಮತ್ತು 15ರಂದು ನಡೆಯಲಿರುವ ಶಿವಪಾಡಿ ವೈಭವ...
error: Content is protected !!