Sunday, February 8, 2026
Sunday, February 8, 2026

ಜಿ.ಬಿ.ನ್. ಕ್ರಿಯೇಶನ್ಸ್ ಹಾಗೂ ಶ್ರೀ ದುರ್ಗಾ ಮ್ಯೂಸಿಕ್ ಮೀಟ್: ಲೈವ್ ಆರ್ಕೆಸ್ಟ್ರಾ; ಸಾಧಕರಿಗೆ ಸನ್ಮಾನ

ಜಿ.ಬಿ.ನ್. ಕ್ರಿಯೇಶನ್ಸ್ ಹಾಗೂ ಶ್ರೀ ದುರ್ಗಾ ಮ್ಯೂಸಿಕ್ ಮೀಟ್: ಲೈವ್ ಆರ್ಕೆಸ್ಟ್ರಾ; ಸಾಧಕರಿಗೆ ಸನ್ಮಾನ

Date:

ಉಡುಪಿ, ಜ.22: ಶ್ರೀ ಶಿರೂರು ಮಠದ ಪರ್ಯಾಯದ ಅಂಗವಾಗಿ ಜಿ.ಬಿ.ನ್. ಕ್ರಿಯೇಶನ್ಸ್ ಹಾಗೂ ಶ್ರೀ ದುರ್ಗಾ ಮ್ಯೂಸಿಕ್ ಮೀಟ್ ಇವರ ಆಶ್ರಯದಲ್ಲಿ ಲೈವ್ ಆರ್ಕೆಸ್ಟ್ರಾ ಕಾರ್ಯಕ್ರಮ ಯುಬಿ ಸ್ಕ್ವೇರ್ ಮುಂಭಾಗದಲ್ಲಿ ನಡೆಯಿತು, ಕಾರ್ಯಕ್ರಮದ ಉದ್ಘಾಟನೆಯನ್ನು ಹರಿಪ್ರಸಾದ್ ರೈ ಚೇರ್ಮನ್ ಎಚ್. ಪಿ. ಆರ್. ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ ನೆರವೇರಿಸಿದರು ಮುಖ್ಯ ಅತಿಥಿಗಳಾಗಿ ಬದ್ರಿನಾಥ್ ನಾಯರಿ, ರಾಘವೇಂದ್ರ, ಡಾ. ಭಾಸ್ಕರ್, ಡಾ. ಶಬರಿ, ಕೆ ಗಣೇಶ್ ಕುಮಾರ್ ಮಟ್ಟು ವಕೀಲರು, ಅನಿಲ್ ರಾಜ್, ರಾಜೇಶ್ ಹೆಗ್ಡೆ, ತೇಜಸ್ವಿನಿ ಅನಿಲ್ ರಾಜ್ ಉಪಸ್ಥಿತರಿದ್ದರು, ಕಾರ್ಯಕ್ರಮದ ಸಂಚಾಲಕರಾದ ನಂದಕಿಶೋರ ಕೆಮ್ಮಣ್ಣು ಸ್ವಾಗತಿಸಿದರು, ಪ್ರಾರ್ಥನೆಯನ್ನು ದಿನೇಶ್ ಕಡೆಕಾರ್ ನೆರವೇರಿಸಿದರು, ಸ್ವಾತಿ ಹಾಗೂ ಪ್ರವೀಣ್ ಕುಮಾರ್ ತೋನ್ಸೆ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಹಂಸಾಖ್ಯ ಯಕ್ಷಕಿರಣ ಕಲಾ ಪ್ರತಿಷ್ಠಾನ ಬೈಲೂರು ಉಡುಪಿ ಇದರ ಸದಸ್ಯರಾದ ಯಶಸ್ವಿ ಅಶೋಕ್ ಮತ್ತು ರಮ್ಯಾ ದೇಶಪಾಂಡೆ ಇವರಿಂದ “ಯಕ್ಷನಾಟ್ಯ” ಕಾರ್ಯಕ್ರಮ ನಡೆಯಿತು. ಸಂಗೀತ ಕಲಾವಿದರಾದ ಪ್ರಜ್ಞಾ ರಾವ್ ಕಟೀಲ್, ಹಾಗೂ ದೃತಿ ಶೆಟ್ಟಿ ಹಾಗೂ ವೈಷ್ಣವಿ ಭಟ್ ಇವರಿಗೆ ಸನ್ಮಾನಿಸಲಾಯಿತು. ಹೊರರಾಜ್ಯ ಹಾಗೂ ಮಂಗಳೂರು ಸ್ಥಳೀಯ ಸಂಗೀತ ಕಲಾವಿದರಾದ ಪ್ರಜ್ಞ ರಾವ್ ಕಟೀಲ್, ಅನುಕುಮಾರ್, ದಿನೇಶ್ ಕಡೆಕಾರ್, ಮಂಜುನಾಥ ಆಚಾರ್ಯ, ಸಚಿನ್ ಸಾಲಿಯಾನ್, ಅನಿಲ್ ರಾಜ್, ದೃತಿ ಶೆಟ್ಟಿ, ವೈಷ್ಣವಿ ಭಟ್ ಭಾಗವಹಿಸಿದ್ದರು. ವಾದ್ಯ ತಂಡದಲ್ಲಿ ಆನಂದ್ ಪೆರ್ಡೂರ್. ಹರೀಶ್ ಕೆ ಪೆರ್ಡೂರ್, ಸತೀಶ್ ಹಾವಂಜೆ, ಐವನ್ ರಿಚರ್ಡ್ ಡಿಸೋಜಾ, ಸ್ವರಾಜ್ ಸಾಲಿಯಾನ್ ಮಂಗಳೂರು ಸಹಕರಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪೊಲೀಸ್ ಅಧಿಕಾರಿಗಳಿಗೆ ಮಕ್ಕಳ ರಕ್ಷಣಾ ಕಾಯ್ದೆಯ ಸ್ಪಷ್ಟ ಅರಿವು ಅಗತ್ಯ: ಮನು ಪಟೇಲ್

ಉಡುಪಿ, ಫೆ.7: ಮಕ್ಕಳ ಹಕ್ಕುಗಳ ರಕ್ಷಣೆಗೆ ಸಂಬಂಧಿಸಿದ ಕಾನೂನುಗಳಿಗೆ ಸಂಬಂಧಪಟ್ಟಂತೆ ಮೊದಲನೇ...

ಮೊಗವೀರ ಯುವ ಸಂಘಟನೆ ಹೆಮ್ಮಾಡಿ ಘಟಕದ ನೂತನ ಪದಾಧಿಕಾರಿಗಳ ಪದಪ್ರದಾನ

ಹೆಮ್ಮಾಡಿ, ಫೆ.7: ಸಂಘಟನೆಯ ಮೂಲಕ ಸಮಾಜದ ಏಳ್ಗೆ ಸಾಧ್ಯವಿದೆ. ಸ್ವಾಭಿಮಾನವನ್ನು ಯಾರಿಗೂ...

ಉಡುಪಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಡಾ. ಭಾಸ್ಕರಾನಂದ ಕುಮಾರ್ ಆಯ್ಕೆ

ಉಡುಪಿ, ಫೆ.6: ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಹದಿನಾರನೇ ಕನ್ನಡ...

ತೆಂಕನಿಡಿಯೂರು ರೂ. 58.5 ಲಕ್ಷ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಯಶ್ ಪಾಲ್ ಸುವರ್ಣ ಚಾಲನೆ

ಮಲ್ಪೆ, ಫೆ.6: ತೆಂಕನಿಡಿಯೂರು ಗ್ರಾಮದಲ್ಲಿ ರೂ. 58.50 ಲಕ್ಷ ವೆಚ್ಚದವಿವಿಧ ರಸ್ತೆ...
error: Content is protected !!