ಉಡುಪಿ, ಜ.10: ಜೇಸಿಐ ಉಡುಪಿ ಸಿಟಿ ರೀಜನ್ ಸಿ, ಜೋನ್ 15, ಜೇಸಿಐ ಇಂಡಿಯಾ ಮತ್ತು ಜೂನಿಯರ್ ಜೇಸಿ ಆಶ್ರಯದಲ್ಲಿ ಮಣಿಪಾಲ ರಾಜೀವನಗರದ ಸರಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ಜನವರಿ 12 ರಂದು ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮ ನಡೆಯಲಿದೆ. ಉಪನ್ಯಾಸಕ ಡಾ. ಗಣೇಶ್ ಪ್ರಸಾದ್ ಜಿ. ನಾಯಕ್ ಅವರು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಸರಕಾರಿ ಸಂಯುಕ್ತ ಪ್ರೌಢಶಾಲೆ ಮುಖ್ಯ ಶಿಕ್ಷಕರಾದ ಬಾಲಕೃಷ್ಣ ಪಿ., ವ್ಯಕ್ತಿತ್ವ ವಿಕಸನ ತರಬೇತುದಾರ ರಾಘವೇಂದ್ರ ಪ್ರಭು ಕರ್ವಾಲು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಜೇಸಿಐ ಉಡುಪಿ ಸಿಟಿ ಅಧ್ಯಕ್ಷರಾದ ಪಲ್ಲವಿ ಕೊಡಗು, ಪ್ರಾಜೆಕ್ಟ್ ನಿರ್ದೇಶಕರುಗಳಾದ ಗಗನಾ, ಅರವಿಂದ್ ರುದ್ರಪ್ಪ ಸಜ್ಜನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜ.12: ರಾಜೀವನಗರ ಪ್ರೌಢಶಾಲೆಯಲ್ಲಿ ವಿವೇಕಾನಂದ ಜಯಂತಿ
ಜ.12: ರಾಜೀವನಗರ ಪ್ರೌಢಶಾಲೆಯಲ್ಲಿ ವಿವೇಕಾನಂದ ಜಯಂತಿ
Date:




By
ForthFocus™