ಉಡುಪಿ, ಅ.17: ಪರೀಕ ಶ್ರೀ ಮಾಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ಶತಚಂಡಿಕಯಾಗದ ಸಭಾ ಕಾರ್ಯಕ್ರಮದಲ್ಲಿ ಮಂಗಳ ಕಲಾ ಸಾಹಿತ್ಯ ವೇದಿಕೆಯ ಅಧ್ಯಕ್ಷ ಚಿಂತಕರು ಪ್ರವಚನಕಾರರಾದ ನಟರಾಜ್ ಪರ್ಕಳ ವಿರಚಿತ ‘ಧರ್ಮಜ್ಞಾನ’ ಹಾಗೂ ಕೃಷ್ಣಪ್ರಿಯಾ ಮುಂಬೈ ಇವರು ರಚಿಸಿದ ‘ಸೇವೆಗಳ ಮಾರ್ಗದಲ್ಲಿ’ ಎಂಬ ಎರಡು ಪುಸ್ತಕಗಳನ್ನು ಲೀಲಾ ಮತ್ತು ಡಾ. ಗೋಪಾಲಕೃಷ್ಣರಾವ್ ಪರಿಕ ಇವರು ಬಿಡುಗಡೆಗೊಳಿಸಿದರು.
ಮುಖ್ಯ ಅತಿಥಿಗಳಾಗಿ ಬಾಲಚಂದ್ರ ರಾವ್ ಉಡುಪಿ, ಕರುಣಾಕರ ಬೆಳ್ಳೆ, ಪರೀಕ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಉದಯ ಹೆಗ್ಡೆ, ಗೋವಿಂದರಾವ್ ಪರ್ಕಳ. ಶ್ರೀನಿವಾಸ ಉಪಾಧ್ಯ ಮೊದಲಾದವರು ಉಪಸ್ಥಿತರಿದ್ದರು. ಡಾ. ರಾಜೇಶ್ ರಾವ್ ಮುಂಬೈ ಕಾರ್ಯಕ್ರಮ ನಿರೂಪಿಸಿದರು.




By
ForthFocus™