Monday, January 19, 2026
Monday, January 19, 2026

ಕಲ್ಯಾಣಪುರ: ‘ಲಿಂಗಮುದ್ರೆ-ಗಡಿಕಲ್ಲು’ಪತ್ತೆ

ಕಲ್ಯಾಣಪುರ: ‘ಲಿಂಗಮುದ್ರೆ-ಗಡಿಕಲ್ಲು’ಪತ್ತೆ

Date:

ಉಡುಪಿ, ಅ.7: ಕಲ್ಯಾಣಪುರ ಗ್ರಾ. ಪಂ. ವ್ಯಾಪ್ತಿಯ ‘ಪಕ್ಕಿಬೆಟ್ಟು-ಗರೋಡಿಗೆ’ ಹೋಗುವ ದಾರಿಯಲ್ಲಿ ‘ಬಬ್ಬುಸ್ವಾಮಿ ದೈವದ ಗುಡಿ ಬಳಿ ಶಿಲೆಯೊಂದು ದೊರೆತಿದ್ದು ಸೂರ್ಯ -ಚಂದ್ರ, ಉಬ್ಬುಶಿಲ್ಪದ ಲಿಂಗಮುದ್ರೆ ಕಲ್ಲು ಪತ್ತೆಯಾಗಿದೆ.

ಸಮಾಜ ಸೇವಕರಾದ ಅಪ್ಪು ಟೈಲರ್ ಹಾಗೂ ಅವಿನಾಶ್ ಪಕ್ಕಿಬೆಟ್ಟು ಇವರು ಉಡುಪಿಯ ಪ್ರಾಚ್ಯ ಸಂಚಯ ಸಂಶೋಧನಾ ಕೇಂದ್ರದ ನಿರ್ದೇಶಕ ಪ್ರೊ.. ಎಸ್. ಎ. ಕೃಷ್ಣಯ್ಯ ಹಾಗೂ ಹವ್ಯಾಸಿ ಇತಿಹಾಸ ಸಂಶೋಧಕ ಸದಸ್ಯ, ಉಡುಪಿ, ಕಡಿಯಾಳಿಯ ಯು. ಕ. ಬಾಯ್ ಪ್ರೌ. ಶಾ. ನಿವೃತ್ತ ಅಧ್ಯಾಪಕ ಕೆ. ಶ್ರೀಧರ ಭಟ್, ಕಲ್ಯಾಣಪುರ ಇವರಿಗೆ ಮಾಹಿತಿಗಳನ್ನು ನೀಡಿ ಸಹಕರಿಸಿದ್ದಾರೆ. ‘ಮೇಲ್ನೋಟಕ್ಕೆ ಇದು 17ನೇ ಶತಮಾನದ ಕೆಳದಿ ಕಾಲದೆಂದು ಕಂಡುಬಂದರೂ ನಿಖರತೆಗಾಗಿ ಹೆಚ್ಚಿನ ಅಧ್ಯಯನವನ್ನು ಕೈಗೊಳ್ಳಲಾಗುವುದು. ಇಂತಹ ಅವಶೇಷಗಳು, ಪುರಾತತ್ವ ಮಾಹಿತಿಗಳು ದೊರಕಿದಲ್ಲಿ ಇತಿಹಾಸ ಸಂಶೋಧಕರಿಗೆ ಪೂರಕ ಮಾಹಿತಿಗಳನ್ನು ಒದಗಿಸುವುದರ ಮೂಲಕ ಸಹಕರಿಸಬೇಕೆಂದು ಶ್ರೀಧರ್ ಭಟ್ ಹೇಳಿದ್ದಾರೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಹೆಬ್ರಿ: ಆಳುಪ ನಾಗದೇವರಸನ ಶಾಸನದ ಅಧ್ಯಯನ

ಹೆಬ್ರಿ, ಜ.18: ತಾಲೂಕಿನ ಬೆಳ್ವೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಲ್ಬಾಡಿ ಪ್ರದೇಶದ...

ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾದ ಶೀರೂರು ಪರ್ಯಾಯ

ಉಡುಪಿ, ಜ.18: ಶೀರೂರು ಮಠಾಧೀಶ ಶ್ರೀ ಶ್ರೀ ವೇದವರ್ಧನ ತೀರ್ಥರು ಶ್ರೀಕೃಷ್ಣನ...

ಸರಸ್ವತಿ ವಿದ್ಯಾಲಯ: ರಾಷ್ಟ್ರೀಯ ಯುವ ದಿನಾಚರಣೆ

ಗಂಗೊಳ್ಳಿ, ಜ.18: ಸ್ವಾಮಿ ವಿವೇಕಾನಂದರ ಜೀವನವನ್ನು ಅವಲೋಕಿಸುವ ಮೂಲಕ ನಾವು ನಮ್ಮ...

ಶಿವಯೋಗಿ ಸಿದ್ಧರಾಮರ ಕಾಯಕದ ಮಹತ್ವ ಪ್ರತಿಯೊಬ್ಬರೂ ಪಾಲಿಸುವಂತಾಗಲಿ: ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ

ಉಡುಪಿ, ಜ.18: ಕಾಯಕದ ಮಹತ್ವವನ್ನು ತಿಳಿಸಿದ ಶಿವಯೋಗಿ ಸಿದ್ದರಾಮರ ತತ್ವ ಆದರ್ಶಗಳನ್ನು...
error: Content is protected !!