ಉಪ್ಪೂರು, ಜು.28: ರಜತ ಸಂಭ್ರಮದಲ್ಲಿರುವ ಕೊಳಲಗಿರಿ ಯುವವಿಚಾರ ವೇದಿಕೆ (ರಿ) 21ನೇ ಕಾರ್ಯಕ್ರಮವಾಗಿ “ಆಟಿದ ನೆಂಪು ತಿನಸುದ ತಂಪು” ವೇದಿಕೆ ಅಧ್ಯಕ್ಷರಾದ ಸಂದೀಪ್ ಶೆಟ್ಟಿ ಅಧ್ಯಕ್ಷತೆಯಲ್ಲಿ, ದೈವಾರಾಧಕರಾದ ಮುಖ್ಯ ಅತಿಥಿ ಪಡ್ಡಂ ಸಂಜೀವ ಪಾಣರವರಿಂದ ಯುವ ವಿಚಾರ ವೇದಿಕೆಯಲ್ಲಿ ಉದ್ಗಾಟನೆಗೊಂಡು, ಪಂಚಾಯತ್ ಸದಸ್ಯೆ ಸರೋಜ ಸನಿಲ್, ಸಾಕ್ಸೋಪೋನ್ ವಾದಕ ಪಾಂಡುರಂಗ ಪಡ್ಡಮ್, ಪ್ರಧಾನ ಕಾರ್ಯದರ್ಶಿ ಸದಾಶಿವ ಕುಮಾರ್, ಮಾಧವ ಪಾಣ, ಉಪ್ಪೂರು ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕರಾದ ರಮೇಶ ಕರ್ಕೇರಾ ಉಪಸ್ಥಿತಿಯಲ್ಲಿ ಜರುಗಿತು.
ಉಪ್ಪೂರು ಗ್ರಾಮದಲ್ಲಿ ಹಲವಾರು ಗರ್ಭಿಣಿಯರಿಗೆ ಪ್ರಸೂತಿ ಮಾಡಿಸಿದ್ದ ನರ್ನಾಡು ಗುಲಾಬಿ ಮಡಿವಾಳ್ತಿ ಹಾಗೂ ಕೊಳಲಗಿರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿಯಾಗಿ ಸುಧೀರ್ಘ ಕಾಲ ಸೇವೆ ಸಲ್ಲಿಸಿ ಜನಾನುರಾಗಿಯಾಗಿದ್ದ ಶಕುಂತಳ ರವರನ್ನು ಸನ್ಮಾನಿಸಲಾಯಿತು. 40 ಬಗೆಯ ವಿವಿಧ ಗ್ರಾಮೀಣ ಸೊಗಡಿನ ಖಾದ್ಯಗಳನ್ನು ಸಂಘದ ಸದಸ್ಯರು ಮನೆಯಲ್ಲಿ ತಯಾರಿಸಿ ತಂದಿದ್ದರು. ವಿವಿಧ ಗ್ರಾಮೀಣ ಸಂಸ್ಕೃತಿಗೆ ಸಂಬಂಧಿಸಿದ ಸ್ಪರ್ಧೆಗಳನ್ನು ಈ ಸಂದರ್ಭದಲ್ಲಿ ಏರ್ಪಡಿಸಲಾಗಿತ್ತು. ಜಯಲಕ್ಷ್ಮಿ ಪ್ರಾರ್ಥನೆ ನೆರವೇರಿಸಿದರು. ಶಾಂತ ಸೆಲ್ವರಾಜ ಸ್ವಾಗತಿಸಿ, ಯೋಗೀಶ್ ಗಾಣಿಗ ಕಾರ್ಯಕ್ರಮ ನಿರೂಪಿಸಿ ಶಕುಂತಳಾ ವಂದಿಸಿದರು. ಪುಷ್ಪಲತಾ ನರ್ಸರಿಯ ಮಾಲೀಕರಾದ ಕೇಶವ್ ರವರಿಂದ ಗಿಡ ಮರಗಳಿಂದ ರೂಪುಗೊಂಡ ಆಕರ್ಷಕ ಹಸಿರು ನೈಜ ಅಲಂಕಾರ ಕಾರ್ಯಕ್ರಮಕ್ಕೆ ಮೆರುಗು ನೀಡಿತು.




By
ForthFocus™