ಕೊಡವೂರು, ಏ.11: ಕೊಡವೂರುದ ಜುಮಾದಿಕೋಲ ಇದರ ಆಮಂತ್ರಣ ಬಿಡುಗಡೆ ಕಾರ್ಯಕ್ರಮ ಕೊಡವೂರು ಶ್ರೀ ಶಂಕರನಾರಾಯಣ ದೇವಾಲಯದಲ್ಲಿ ಪ್ರಾರ್ಥನೆಯೊಂದಿಗೆ ವಸಂತ ಮಂಟಪದಲ್ಲಿ ಜರಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಪಂಚ ಧೂಮಾವತಿ ದೈವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷರಾದ ಸುಭಾಷ್ ಮೆಂಡನ್ ವಹಿಸಿದ್ದರು.
ಮುಖ್ಯ ಅತಿಥಿಯಾಗಿ ಭೂ ಸಮರ್ಪಣಾ ಸಮಿತಿಯ ಗೌರವಾಧ್ಯಕ್ಷ ಸಾಧು ಸಾಲಿಯಾನ್, ಭೂ ಸಮರ್ಪಣಾ ಸಮಿತಿಯ ಗೌರವ ಸಲಹೆಗಾರ ಕಾಪು ಬೂಡು ಅನಿಲ್ ಬಲ್ಲಾಳ್, ಶ್ರೀ ಪಂಚ ಧೂಮಾವತಿ ದೈವಸ್ಥಾನ ಇದರ ಆಡಳಿತ ಮಂಡಳಿಯ ಗೌರವಾಧ್ಯಕ್ಷರು ಅಣ್ಣಪ್ಪ ಶೆಟ್ಟಿ, ಪಡ್ಲನೆರ್ಗಿ ನಾಗರಿಕ ಸಮಿತಿ ಅಧ್ಯಕ್ಷರಾದ ಶೇಖರ್ ಪುತ್ರನ್, ಶ್ರೀ ಶಂಕರ ನಾರಾಯಣ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ವಾದಿರಾಜ ಸಾಲಿಯನ್, ಕೊಡವೂರು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸತೀಶ್ ಕೊಡವೂರು, ಮತ್ಸೋದ್ಯಮಿ ಮಂಜುನಾಥ ಕೊಳ,
ಶ್ರೀ ಪಂಚ ಧೂಮಾವತಿ ದೈವಸ್ಥಾನದ ಭೂ ಸಮರ್ಪಣಾ ಸಮಿತಿಯ ಕಾರ್ಯಾಧ್ಯಕ್ಷ ಕೊಡವೂರು ವಾರ್ಡ್ ನಗರಸಭಾ ಸದಸ್ಯರಾದ ವಿಜಯ ಕೊಡವೂರು, ಭೂಸಮರ್ಪಣ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರಭಾತ್ ಕೊಡವೂರು, ಶಂಕರನಾರಾಯಣ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯೆ ಶೀಲ ಕೃಷ್ಣ ದೇವಾಡಿಗ, ಶ್ರೀ ವೀರ ಮಾರುತಿ ಭಜನಾ ಮಂಡಳಿಯ ಮಾಜಿ ಮಹಿಳಾ ಸಮಿತಿಯ ಅಧ್ಯಕ್ಷೆ ಹೇಮಲತಾ ರಮೇಶ್ ಸುವರ್ಣ, ಮಾತೃಶ್ರೀ ಮಹಿಳಾ ಮಂಡಲ ಗರ್ಡೆ ಇದರ ಅಧ್ಯಕ್ಷೆ ಪ್ರೇಮ ಉಪಸ್ಥಿತರಿದ್ದರು.
ಭೂ ಸಮರ್ಪಣಾ ಸಮಿತಿಯ ಉಪಾಧ್ಯಕ್ಷ ಸಚಿನ್ ಸ್ವಾಗತಿಸಿ, ಸಮಿತಿಯ ಕಾರ್ಯದರ್ಶಿ ಚಂದ್ರಕಾಂತ್ ಕೊಡವೂರು ವಂದಿಸಿದರು. ದೇವರಾಜ್ ಸುವರ್ಣ, ನಿತ್ಯಾನಂದ ಅಮೀನ್, ಸಂದೇಶ್ ಕೋಟ್ಯಾನ್, ದೀಕ್ಷಿತ್ ದೇವಾಡಿಗ, ಜಯ ಸಾಲಿಯಾನ್ ಜುಮಾದಿ ನಗರ, ಅಮಿತ್ ಗರಡೆ, ನಾಗರಾಜ್ ಗಾಣಿಗ ತೆಂಕನಿಡಿಯೂರು, ದಯಾನಂದ ಮೇಸ್ತ್ರಿ ಕೊಡವೂರು, ಕಿಶೋರ್ ಬೈಲಕೆರೆ, ಅಶೋಕ್ ಶೆಟ್ಟಿಗಾರ್, ದೀಪಕ್ ಕೊಡವೂರು, ಪ್ರೀತಿ ವಿಜಯ್, ಚಂದ್ರಾವತಿ ಕಾನಂಗಿ, ಗೀತಾ ಲಕ್ಷ್ಮೀನಗರ, ಸುಶೀಲಾ ಜಯಕರ್, ಶುಭ ಯೋಗೇಶ್ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.




By
ForthFocus™