ಕಾಪು, ಮಾ.9: ಕಾಪು ಕೊಪ್ಪಲಂಗಡಿಯ ಶ್ರೀ ವಾಸುದೇವ ಸ್ವಾಮಿ ದೇವಸ್ಥಾನದ ವತಿಯಿಂದ ಶ್ರೀ ಕ್ಷೇತ್ರ ಕಟೀಲಿಗೆ 7ನೇ ವರ್ಷದ ಪಾದಯಾತ್ರೆ ‘ನಮ್ಮ ನಡಿಗೆ ಕಟೀಲಮ್ಮನಡೆಗೆ’ ನಡೆಯಿತು. ಶ್ರೀ ವಾಸುದೇವ ಸ್ವಾಮಿ ಭಜನಾ ಮಂಡಳಿಯ ಗೌರವಾಧ್ಯಕ್ಷ ಉದಯ ಶೆಟ್ಟಿ, ಅಧ್ಯಕ್ಷ ನಾಗೇಶ ಸುವರ್ಣ, ಕಾರ್ಯದರ್ಶಿ ಹರೀಶ್, ಭಜನಾ ಸಂಚಾಲಕ ಉಮೇಶ್ ಪೂಜಾರಿ, ನಾರಾಯಣ ಶೆಟ್ಟಿ, ರಘುರಾಮ್ ಶೆಟ್ಟಿ, ದಿವಾಕರ ಶೆಟ್ಟಿ ಕಾಪು, ಅನಿಲ್ ಶೆಟ್ಟಿ, ರವಿ, ಶಂಕರ್, ಸಚಿನ್ ಪುತ್ರನ್, ದೇವಳದ ಅರ್ಚಕರಾದ ನಾಗರಾಜ ಭಟ್, ಲಕ್ಷ್ಮೀ ಜನಾರ್ದನ ದೇವಸ್ಥಾನದ ಪದಾಧಿಕಾರಿ ರವಿ ಭಟ್ ಮಂದಾರ, ಪುರಸಭೆ ಸದಸ್ಯ ಅನಿಲ್ ಮುಂತಾದವರು ಉಪಸ್ಥಿತರಿದ್ದರು. ಪಾದಯಾತ್ರೆಯಲ್ಲಿ ಸುಮಾರು 300 ಭಕ್ತರು ಭಾಗವಹಿಸಿದ್ದರು.
ನಮ್ಮ ನಡಿಗೆ ಕಟೀಲಮ್ಮನಡೆಗೆ
ನಮ್ಮ ನಡಿಗೆ ಕಟೀಲಮ್ಮನಡೆಗೆ
Date:




By
ForthFocus™