ಉಡುಪಿ, ಮಾ.7: ವ್ಯೋಮ್ ಡ್ಯಾನ್ಸ್ ಅಕಾಡೆಮಿ ಇದರ ಸ್ಥಳಾಂತರಗೊಂಡ ನೃತ್ಯ ತರಗತಿಯು ಬ್ರಹ್ಮಗಿರಿಯಲ್ಲಿ ಪ್ರಾರಂಭಗೊಂಡಿತು ಉದ್ಯಮಿಗಳಾದ ಕೆ. ಕೃಷ್ಣಮೂರ್ತಿ ಆಚಾರ್ಯ ಇವರು ಸಂಸ್ಥೆಯನ್ನು ಉದ್ಘಾಟಿಸಿ ಮಾತನಾಡುತ್ತಾ, ಈ ಅಕಾಡೆಮಿ ಉತ್ತಮ ಹೆಸರನ್ನು ಗಳಿಸುತ್ತಿದ್ದು ಇದರ ಪ್ರಮುಖರಾದ ಅವಿನಾಶ್ ಇವರು ಕನ್ನಡ ಹಾಗೂ ತುಳು ಚಿತ್ರರಂಗಕ್ಕೂ ಕೋರಿಯೋಗ್ರಫಿಯನ್ನು ಮಾಡುತ್ತಿದ್ದು ಹೆಸರಾಂತ ಕಲಾವಿದರುಗಳಿಗೆ ತರಬೇತಿಯನ್ನು ನೀಡುತ್ತಿದ್ದು ಇದು ನಮ್ಮ ಕೃಷ್ಣನೂರಿಗೆ ಹೆಮ್ಮೆ ಎಂದರು. ಮುಖ್ಯ ಅತಿಥಿಯಾದ ಖ್ಯಾತ ನಟ ಪೃಥ್ವಿ ಅಂಬರ್ ಮಾತನಾಡಿ, ಅವಿನಾಶ್ ಸಾಧನೆ ಇನ್ನಷ್ಟು ಉತ್ತುಂಗಕ್ಕೇರಲಿ ಎಂದರು. ಶಟರ್ ಬಾಕ್ಸ್ ಚಾನೆಲ್ ನ ಸಚಿನ್ ಎಸ್. ಶೆಟ್ಟಿ, ಇಂಜಿನಿಯರ್ ಮಿಥುನ್ ಪಿ. ಶೆಟ್ಟಿ, ನಿವೃತ್ತ ಪೋಲೀಸ್ ಅಧಿಕಾರಿ ನಾರಾಯಣ ಶುಭ ಹಾರೈಸಿದರು. ಸಂಸ್ಥೆಯ ಮುಖ್ಯಸ್ಥರಾದ ಅವಿನಾಶ್ ಹಾಗೂ ಸಂಸ್ಥೆಯ ಕಲಾವಿದರು, ಹಿತೈಷಿಗಳು ಉಪಸ್ಥಿತರಿದ್ದರು.
ವ್ಯೋಮ್ ಡ್ಯಾನ್ಸ್ ಅಕಾಡೆಮಿ ಕೃಷ್ಣನೂರಿಗೆ ಹೆಮ್ಮೆ
ವ್ಯೋಮ್ ಡ್ಯಾನ್ಸ್ ಅಕಾಡೆಮಿ ಕೃಷ್ಣನೂರಿಗೆ ಹೆಮ್ಮೆ
Date:




By
ForthFocus™