Home ಸುದ್ಧಿಗಳು ಪ್ರಾದೇಶಿಕ ದಾದರ್-ತಿರುನಲ್ವೇಲಿ ರೈಲಿಗೆ ಬೈಂದೂರಿನಲ್ಲಿ ನಿಲುಗಡೆ

ದಾದರ್-ತಿರುನಲ್ವೇಲಿ ರೈಲಿಗೆ ಬೈಂದೂರಿನಲ್ಲಿ ನಿಲುಗಡೆ

146
0

ಬೈಂದೂರು, ಮಾ.3: ಬೈಂದೂರಿನ ಮೂಕಾಂಬಿಕಾ ರೈಲು ನಿಲ್ದಾಣದಲ್ಲಿ ದಾದರ್-ತಿರುನಲ್ವೇಲಿ ಎಕ್ಸ್ ಪ್ರೆಸ್ ರೈಲು ನಿಲುಗಡೆಯಾಗಲಿದೆ. ಇದರಿಂದ ಬೈಂದೂರಿನ ಯಾತ್ರಾರ್ಥಿಗಳು ಮಧುರೈ, ಗುರುವಾಯೂರು, ಶಬರಿಮಲೈ ದೇವಸ್ಥಾನಗಳಿಗೆ ತೆರಳಲು ಹಾಗೂ ಅಲ್ಲಿನ ಯಾತ್ರಾರ್ಥಿಗಳು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಬರಲು ಸಹಕಾರಿಯಾಗಲಿದೆ ಎಂದು ಬೈಂದೂರು ಶಾಸಕರಾದ ಗುರುರಾಜ್ ಗಂಟಿಹೊಳೆ ಹರ್ಷ ವ್ಯಕ್ತಪಡಿಸಿದ್ದಾರೆ. ನಿರ್ಧಾರ ಕೈಗೊಳ್ಳಲು ಸಹಕರಿಸಿದ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಮತ್ತು ಸಂಸದರಾದ ಬಿ.ವೈ. ರಾಘವೇಂದ್ರ ಅವರಿಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.