Home ಸುದ್ಧಿಗಳು ಪ್ರಾದೇಶಿಕ ಪೆರಂಪಳ್ಳಿ ಉಪಚುನಾವಣೆ ಫಲಿತಾಂಶ ಮೋದಿ ಗ್ಯಾರಂಟಿಗೆ ಸಂದ ಗೆಲುವು: ಯಶ್ಪಾಲ್ ಸುವರ್ಣ

ಪೆರಂಪಳ್ಳಿ ಉಪಚುನಾವಣೆ ಫಲಿತಾಂಶ ಮೋದಿ ಗ್ಯಾರಂಟಿಗೆ ಸಂದ ಗೆಲುವು: ಯಶ್ಪಾಲ್ ಸುವರ್ಣ

419
0

ಉಡುಪಿ, ಡಿ.30: ಮೂಡುಪೆರಂಪಳ್ಳಿ ವಾರ್ಡಿನ ಉಪಚುನಾವಣೆಯಲ್ಲಿ ವಾರ್ಡಿನ ಜನತೆ ಬಿಜೆಪಿ ಅಭ್ಯರ್ಥಿ ಅನಿಟ ಬೆಲಿಂಡ ಡಿಸೋಜಾ ರವರನ್ನು ಗೆಲ್ಲಿಸುವ ಮೂಲಕ ದೇಶದ ಸರ್ವತೋಮುಖ ಅಭಿವೃದ್ಧಿಗೆ ಪಣತೊಟ್ಟು ದೇಶವನ್ನು ಮುನ್ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರ ಆಡಳಿತಕ್ಕೆ ಸಹಮತ ಸೂಚಿಸಿದ್ದು ಇದು ಮೋದಿ ಗ್ಯಾರಂಟಿಗೆ ಸಂದ ಗೆಲುವು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಹರ್ಷ ವ್ಯಕ್ತಪಡಿಸಿದ್ದಾರೆ.

ಹತ್ತು ವರ್ಷಗಳ ಬಳಿಕ ಪೆರಂಪಳ್ಳಿ ವಾರ್ಡ್ ನಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಉಡುಪಿ ನಗರಸಭೆಯ ಬಿಜೆಪಿ ಆಡಳಿತಕ್ಕೆ ಬೆಂಬಲ ಸೂಚಿಸಿ ಬಿಜೆಪಿ ಪಕ್ಷಕ್ಕೆ ಶಕ್ತಿ ತುಂಬಿದ್ದಾರೆ. ರಾಜ್ಯ ಸರಕಾರದ ಹಿಂದೂ ವಿರೋಧಿ ನೀತಿ, ಗ್ಯಾರಂಟಿ ಕಾರ್ಯಕ್ರಮಗಳ ಅನುಷ್ಠಾನದ ವೈಫಲ್ಯ, ಕರಾವಳಿ ಜಿಲ್ಲೆಗಳ ಕಡೆಗಣನೆಗೆ ಜನತೆ ಚುನಾವಣೆಯ ಮೂಲಕ ದಿಟ್ಟ ಉತ್ತರ ನೀಡಿದ್ದಾರೆ.

ಪೆರಂಪಳ್ಳಿ ಉಪಚುನಾವಣೆಯ ಗೆಲುವು ಮುಂದಿನ ಲೋಕಸಭಾ ಚುನಾವಣೆಗೆ ದಿಕ್ಸೂಚಿಯಾಗಿದ್ದು, ಗೆಲುವಿಗೆ ಸಹಕರಿಸಿದ ವಾರ್ಡಿನ ಜನತೆ, ಪಕ್ಷದ ಮುಖಂಡರು ಹಾಗೂ ಹಗಲಿರುಳು ಶ್ರಮಿಸಿದ ಎಲ್ಲಾ ಕಾರ್ಯಕರ್ತ ಬಂಧುಗಳಿಗೆ ಶಾಸಕನ ನೆಲೆಯಲ್ಲಿ ಧನ್ಯವಾದ ಸಲ್ಲಿಸುವುದಾಗಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.