Home ಸುದ್ಧಿಗಳು ಪ್ರಾದೇಶಿಕ ಸಂಜೀವಿನಿ ಸೇವಾ ಸಂಘ: ‘ಅಜ್ಜಿಗೊಂದು ಮನೆ’ಯ ಗೃಹಪ್ರವೇಶ

ಸಂಜೀವಿನಿ ಸೇವಾ ಸಂಘ: ‘ಅಜ್ಜಿಗೊಂದು ಮನೆ’ಯ ಗೃಹಪ್ರವೇಶ

546
0

ಉಡುಪಿ, ಜು. 9: ಸಂಜೀವಿನಿ ಸೇವಾ ಸಂಘ ಉಡುಪಿ ಮಣಿಪಾಲ ಇದರ 7ನೇ ಮಹತ್ವಾಕಾಂಕ್ಷೆಯ ಯೋಜನೆಯಾಗಿರುವ ‘ಅಜ್ಜಿಗೊಂದು ಮನೆ’ಯ ಗೃಹಪ್ರವೇಶ ಭಾನುವಾರ ಕೊಳಲಗಿರಿ ಮುಟ್ಟಿಕಲ್ಲು ಇಲ್ಲಿ ನಡೆಯಿತು. ಮಾಜಿ ಶಾಸಕರಾದ ಕೆ. ರಘುಪತಿ ಭಟ್, ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ನ ಅರ್ಜುನ್ ಭಂಡಾರ್ಕರ್, ಹ್ಯುಮಾನಿಟಿ ಟ್ರಸ್ಟ್ ನ ರೋಷನ್ ಬೆಳ್ಮಣ್, ಮಲಬಾರ್ ಗೋಲ್ಡ್ ಡೈಮಂಡ್ ನ ಹಫೀಜ್, ಪ್ರೇಮ, ನಾಗರಾಜ್, ಸಂಘದ ಸ್ಥಾಪಕ ಅಧ್ಯಕ್ಷ ರೋವಿನ್ ಪಾಲನ್, ಅಧ್ಯಕ್ಷರಾದ ವಿಶುಕುಮಾರ್, ಸರ್ವಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ದಾನಿಗಳಿಗೆ ಸಂಘದ ವತಿಯಿಂದ ಗೌರವಿಸಲಾಯಿತು ಹಾಗೂ ಎಸ್ಸೆಸ್ಸೆಲ್ಸಿಯಲ್ಲಿ ಶೇಕಡ 96% ಗಳಿಸಿದ ಚಂದನ ತೊಟ್ಟಂ ಇವರನ್ನು ಸನ್ಮಾನಿಸಲಾಯಿತು. ಸುಧೀರ್ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಕೇಶ್ ನಾಯಕ್ ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.