Home ಸುದ್ಧಿಗಳು ಪ್ರಾದೇಶಿಕ ಎಚ್.ಎಂ.ಎಂ., ವಿ.ಕೆ.ಆರ್: ಶಿಕ್ಷಕ‌ – ರಕ್ಷಕ ಸಭೆ

ಎಚ್.ಎಂ.ಎಂ., ವಿ.ಕೆ.ಆರ್: ಶಿಕ್ಷಕ‌ – ರಕ್ಷಕ ಸಭೆ

237
0

ಕುಂದಾಪುರ, ಜು. 8: ಬಿ.ಎಂ ಸುಕುಮಾರ ಶೆಟ್ಟಿಯವರ ಅಧ್ಯಕ್ಷತೆಯ ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಎಚ್. ಎಂ. ಎಂ. ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲಾ ವಿಭಾಗದ 5, 6 ಮತ್ತು 7ನೇ ತರಗತಿಗಳ ಶೈಕ್ಷಣಿಕ ವರ್ಷದ ಮೊದಲ ಶಿಕ್ಷಕ – ರಕ್ಷಕ ಸಭೆ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಪ್ರಾಂಶುಪಾಲರಾದ ಡಾ. ಚಿಂತನಾ ರಾಜೇಶ್ ಮಾತನಾಡಿ, ಒಬ್ಬ ವಿದ್ಯಾರ್ಥಿ ತನ್ನ ಜೀವನದ ಉತ್ಕೃಷ್ಟ ಮಟ್ಟವನ್ನು ತಲುಪುವ ಹಾದಿಯಲ್ಲಿ ಶಿಕ್ಷಕರು ಹಾಗೂ ಪೋಷಕರು ಸಹಕರಿಸಬೇಕಾದ ರೀತಿ, ಅವರನ್ನು ಅರ್ಥ ಮಾಡಿಕೊಳ್ಳಬೇಕಾದ ವಿಧಾನಗಳ ಬಗ್ಗೆ ಚರ್ಚಿಸಿದರು. ಮಕ್ಕಳ ಬದುಕಿನಲ್ಲಿ ಅವರ ಜೊತೆ ಪಯಣಿಸುವ ಪ್ರಮುಖ ವ್ಯಕ್ತಿಗಳಾದ, ಪೋಷಕರು ಹಾಗೂ ಶಿಕ್ಷಕರ ಜೊತೆಗೂಡುವಿಕೆ, ಮಕ್ಕಳನ್ನು ಶ್ರೇಷ್ಠತೆಯ ಕಡೆಗೆ ಹೇಗೆ ಕೊಂಡೊಯ್ಯಬಹುದು ಎನ್ನುವ ವಿಚಾರಗಳನ್ನು ತಿಳಿಸಿದರು.

ಶಾಲೆಯ ಮುಖ್ಯ ಶಿಕ್ಷಕರಾದ ಜಗದೀಶ್ ಆಚಾರ್ ಸಾಸ್ತಾನ, ಶಾಲೆಯ ಈ ವರ್ಷದ ಗುರಿ, ಹಮ್ಮಿಕೊಂಡಿರುವ ಹೊಸ ಯೋಜನೆ, ಯೋಚನೆ ಮತ್ತು ಚಟುವಟಿಕೆಗಳ ಬಗ್ಗೆ ಮಾಹಿತಿಸಿದರು. ಸಹಾಯಕ ಮುಖ್ಯ ಶಿಕ್ಷಕಿ ಕವಿತಾ ಭಟ್, ವಿದ್ಯಾರ್ಥಿಗಳು ಮತ್ತು ಪೋಷಕರು ಕೈಗೊಳ್ಳಬೇಕಾದ ಮತ್ತು ಪಾಲಿಸಬೇಕಾದ ಕೆಲವು ನಿಯಮಗಳನ್ನು ಪರಿಚಯಿಸಿದರು. ಸಂಸ್ಥೆಯ ಅಕಾಡೆಮಿಕ್‌ ಕೋ ಆರ್ಡಿನೇಟರ್‌ ವಿಲ್ಮಾ ಡಿ ಸಿಲ್ವಾ ಎಲ್ಲಾ ತರಗತಿ ಶಿಕ್ಷಕರನ್ನು ಸಭೆಗೆ ಪರಿಚಯಿಸಿದರು. ಪೋಷಕರು ಮತ್ತು ಶಿಕ್ಷಕರ ಕುರಿತಾಗಿ ವಿದ್ಯಾರ್ಥಿನಿಯರು ಹಾಡಿದ ಆಶಯಗೀತೆ ಸಭಿಕರ ಗಮನ ಸೆಳೆಯಿತು. ಸಭೆಯಲ್ಲಿ ಇನ್ನೋರ್ವ ಅಕಾಡೆಮಿಕ್‌ ಕೋ ಆರ್ಡಿನೇಟರ್ ವೀರೇಂದ್ರ ನಾಯಕ್, ಎಲ್ಲಾ ಪೋಷಕರು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು. ಶಿಕ್ಷಕಿ ದಿವ್ಯ ನಜರತ್ ವಂದಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.