Saturday, February 7, 2026
Saturday, February 7, 2026

ಪ್ರವಾಸ ಕಥನ ನೈಜ ಅನುಭವ ಮಾಲಿಕೆ: ಸತೀಶ್ ವಡ್ಡರ್ಸೆ

ಪ್ರವಾಸ ಕಥನ ನೈಜ ಅನುಭವ ಮಾಲಿಕೆ: ಸತೀಶ್ ವಡ್ಡರ್ಸೆ

Date:

ಕೋಟ: ಪ್ರವಾಸ ಕಥನವು ಬರಹಗಾರನ ನೈಜ ಅನುಭವದ ಮಾಲಿಕೆಯಾಗಿದ್ದು, ಪ್ರವಾಸದುದ್ದಕ್ಕೂ ತಾನು ಪಡೆದುಕೊಂಡ ಅನುಭವಗಳ ಎಳೆ ಎಳೆಯಾಗಿ ಬಿಚ್ಚಿಡುವ ಕಥನ ಅದು ಬದುಕಿನ ಒಂದು ಭಾಗವೇ ಸರಿ. ಲೇಖಕ ಗೋಪಾಲ ತ್ರಾಸಿ ಅವರ ಪ್ರವಾಸ ಕಥನ “ಲಂಡನ್ ಟು ವ್ಯಾಟಿಕನ್ ಸಿಟಿ (ಎಂಟು ದೇಶ-ನೂರೆಂಟು ವಿಶೇಷ)” ಪ್ರವಾಸ ಕಥನ ಓದುಗರಲ್ಲಿ ಪ್ರವಾಸ ಸಾಹಿತ್ಯದ ಕುರಿತು ವಿಶೇಷ ಅಭಿರುಚಿ ನೀಡುವುದರಲ್ಲಿ ಸಂಶಯವಿಲ್ಲ.

ಕೃತಿಯಲ್ಲಿನ ವರ್ಣರಂಜಿತ ಭಾಷ ಪ್ರಯೋಗ ಎಲ್ಲರನ್ನು ಆಕರ್ಷಿಸಲಿದೆ ಎಂದು ಸಾಹಿತಿ, ಶಿಕ್ಷಕ ಸತೀಶ್ ವಡ್ಡರ್ಸೆ ಹೇಳಿದರು.

ಅವರು ಕೋಟದ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್ನಲ್ಲಿ ನಡೆದ ಗೋಪಾಲ ತ್ರಾಸಿ ಅವರ “ಲಂಡನ್ ಟು ವ್ಯಾಟಿಕನ್ ಸಿಟಿ (ಎಂಟು ದೇಶ-ನೂರೆಂಟು ವಿಶೇಷ)” ಪ್ರವಾಸ ಕಥನ ಬಿಡುಗಡೆ ಕಾರ್ಯಕ್ರಮದಲ್ಲಿ ಪುಸ್ತಕದ ಪರಿಚಯದ ಕುರಿತು ಮಾತನಾಡುತ್ತಿದ್ದರು.

ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಕ.ಸಾ.ಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಯುವ ಜನಾಂಗ ಇತ್ತೀಚಿನ ದಿನಗಳಲ್ಲಿ ಸಾಹಿತ್ಯದ ಬಗ್ಗೆ ಒಲವು ತೋರಿಸುತ್ತಿರುವುದು ಸಂತಸದ ವಿಷಯ ಎಂದರು.

ಲೇಖಕ ಗೋಪಾಲ ತ್ರಾಸಿ, ಸಾಹಿತಿ ಅಮಿತಾಂಜಲಿ ಕಿರಣ್, ಸಾಹಿತಿ ಹಾಗೂ ಉಪನ್ಯಾಸಕಿ ವಾಸಂತಿ ಅಂಬಲಪಾಡಿ, ಕೋಟತಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಶ್ವಿನಿ ದಿನೇಶ್, ಉಪಾಧ್ಯಕ್ಷ ವಾಸು ಪೂಜಾರಿ, ಪ್ರತಿಷ್ಠಾನದ ಅಧ್ಯಕ್ಷ ಆನಂದ್ ಸಿ ಕುಂದರ್, ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ, ಸುಬ್ರಾಯ ಆಚಾರ್, ಸುಮನ ಆರ್ ಹೇರ್ಳೆ, ಉಪನ್ಯಾಸಕ ಸಂಜೀವ, ಪ್ರಶಾಂತ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಉಡುಪಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಡಾ. ಭಾಸ್ಕರಾನಂದ ಕುಮಾರ್ ಆಯ್ಕೆ

ಉಡುಪಿ, ಫೆ.6: ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಹದಿನಾರನೇ ಕನ್ನಡ...

ತೆಂಕನಿಡಿಯೂರು ರೂ. 58.5 ಲಕ್ಷ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಯಶ್ ಪಾಲ್ ಸುವರ್ಣ ಚಾಲನೆ

ಮಲ್ಪೆ, ಫೆ.6: ತೆಂಕನಿಡಿಯೂರು ಗ್ರಾಮದಲ್ಲಿ ರೂ. 58.50 ಲಕ್ಷ ವೆಚ್ಚದವಿವಿಧ ರಸ್ತೆ...

ಕೋಟ ನಾಗಮಂಡಲೋತ್ಸವದ ಚಪ್ಪರ ಮುಹೂರ್ತ

ಕೋಟ, ಫೆ.೬: ಕೋಟದ ಅಮೃತೇಶ್ವರೀ ದೇಗುಲದ ವತಿಯಿಂದ ನಡೆಯಲಿರುವ ಏಕ:ಪವಿತ್ರ ನಾಗಮಂಡಲೋತ್ಸವಕ್ಕೆ...

ಜಿಲ್ಲೆಗೆ ಆಗಮಿಸುವ ಪ್ರವಾಸಿಗರ ಸುರಕ್ಷತೆಗೆ ಪ್ರಥಮ ಆದ್ಯತೆ ನೀಡಿ: ಜಿಲ್ಲಾಧಿಕಾರಿ ಸ್ವರೂಪ ಟಿ. ಕೆ

ಉಡುಪಿ, ಫೆ.6: ಜಿಲ್ಲೆಗೆ ಆಗಮಿಸುವ ಪ್ರವಾಸಿಗರ ಉಪಯೋಗಕ್ಕೆ ಅಗತ್ಯವಿರುವ ಎಲ್ಲಾ ರೀತಿಯ...
error: Content is protected !!