Home ಸುದ್ಧಿಗಳು ಪ್ರಾದೇಶಿಕ ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್- ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯ ರಜತ ಸಂಭ್ರಮದ ಉದ್ಘಾಟನೆ

ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್- ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯ ರಜತ ಸಂಭ್ರಮದ ಉದ್ಘಾಟನೆ

295
0

ಉಡುಪಿ: ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ವತಿಯಿಂದ ಗುಂಡಿಬೈಲು ಬ್ರಾಹ್ಮಿ ಸಭಾಭವನದಲ್ಲಿ 08.01.2023 ರಂದು ಹಮ್ಮಿಕೊಳ್ಳಲಾದ 25ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಲಕ್ಷ್ಮಿ ಹೃದಯ ಹೋಮ ಹಾಗೂ ಪೂರ್ವಭಾವಿಯಾಗಿ 01.01. 2023 ರಿಂದ 07.01.2023 ರವರೆಗೆ ಪ್ರತಿದಿನ ಸಂಜೆ ನಡೆಯುವ ವಿದ್ವಾಂಸರಿಂದ ಪ್ರವಚನ ಸಪ್ತಾಹ , ಪರಿಸರದ ವಿಪ್ರ ವಲಯಗಳಿಂದ ಭಜನೆ, ಸಂಕೀರ್ತನೆ ಮುಂತಾದ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಉದ್ಘಾಟನೆಯನ್ನು ಉಡುಪಿ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರಾದ ಪ್ರೊ. ಹರಿಪ್ರಸಾದ್ ಭಟ್ ಹೆರ್ಗ ಇವರು ನೆರವೇರಿಸಿ ನಿತ್ಯ ಜೀವನದಲ್ಲಿ ಧಾರ್ಮಿಕ ಆಚರಣೆಗಳ ಮಹತ್ವದ ಬಗ್ಗೆ ಉಪನ್ಯಾಸ ನೀಡಿದರು.

ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷರಾದ ಎಂ. ಮಂಜುನಾಥ ಉಪಾಧ್ಯಾಯ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಶುಭಾಶಂಸನೆಗೈದರು.

ಪರಿಷತ್ತಿನ ಮಹಿಳಾ ಸದಸ್ಯರ ತುಳಸಿ ಸಂಕೀರ್ತನೆಯ ತಂಡವನ್ನು ತಾಳ ನೀಡುವುದರ ಮೂಲಕ ಸಾಂಕೇತಿಕವಾಗಿ ಉದ್ಘಾಟಿಸಲಾಯಿತು. ಸಭಾ ಕಾರ್ಯಕ್ರಮದ ನಂತರ ತು.ಶಿ. ಮಾ.ಮ. ಇವರಿಂದ ವಿಶಿಷ್ಟ ಕಾರ್ಯಕ್ರಮ ಮದ್ವಯಾನ ಗಾನ ನಮನ ಸಂಪನ್ನಗೊಂಡಿತು.

ಅದೇ ದಿನ ಬೆಳಿಗ್ಗೆ ಶ್ರೀ ಮೂಡಬೆಟ್ಟು ರಮೇಶ್ ಭಟ್ ಇವರ ನೇತೃತ್ವದಲ್ಲಿ ಗಣಹೋಮ ನೆರವೇರಿಸಲಾಯಿತು.

ಯುವ ಬ್ರಾಹ್ಮಣ ಪರಿಷತ್ತಿನ ಅಧ್ಯಕ್ಷರಾದ ಚೈತನ್ಯ ಎಂ.ಜಿ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.

ರವೀಂದ್ರ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ವಿವೇಕಾನಂದ ಎನ್., ಕೋಶಾಧಿಕಾರಿ ಕುಮಾರಸ್ವಾಮಿ ಉಡುಪ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.