Home ಸುದ್ಧಿಗಳು ಪ್ರಾದೇಶಿಕ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಪುಸ್ತಕ ಮತ್ತು ಕೊಡೆ ವಿತರಣೆ

ವಿದ್ಯಾರ್ಥಿಗಳಿಗೆ ಸಮವಸ್ತ್ರ, ಪುಸ್ತಕ ಮತ್ತು ಕೊಡೆ ವಿತರಣೆ

383
0

ಮಂಗಳೂರು, ಜೂನ್ 18: ಡೊಂಗರಕೇರಿ ಕೆನರಾ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಪುಸ್ತಕ ಮತ್ತು ಕೊಡೆ ವಿತರಣಾ ಸಮಾರಂಭ ಶುಕ್ರವಾರ ನಡೆಯಿತು. ಕೆನರಾ ಆಡಳಿತ ಮಂಡಳಿ, ಶಾರದಾ ಯುವಕ ವೃಂದ, ಬುಕ್ ಮಾರ್ಕ್ ವತಿಯಿಂದ ಸಮವಸ್ತ್ರ ಮತ್ತು ಪುಸ್ತಕಗಳನ್ನು ವಿತರಿಸಲಾಯಿತು.

ರಾಮ್ಕೊ ಸಿಮೆಂಟ್ ವತಿಯಿಂದ ಕೊಡೆ ವಿತರಣಾ ಕಾರ್ಯಕ್ರಮ ನಡೆಯಿತು. ಕೆನರಾ ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿ ಎಂ ರಂಗನಾಥ್ ಭಟ್ ಹಾಗೂ ಶಾಲಾ ಸಂಚಾಲಕರಾದ ಕೆ.ಸುರೇಶ್ ಕಾಮತ್, ಕೆನರಾ ವಿಕಾಸ್ ಕಾಲೇಜಿನ ಸಂಯೋಜಕರಾದ ಬಸ್ತಿ ಪುರುಷೋತ್ತಮ ಶೆಣೈ, ಕೆನರಾ ಶಿಕ್ಷಣ ಸಂಸ್ಥೆಗಳ ಸಾರ್ವಜನಿಕ ಸಂಪರ್ಕ ಅಧಿಕಾರಿ ಉಜ್ವಲ್ ಮಲ್ಯ, ಬುಕ್ ಮಾರ್ಕಿನ ಮ್ಯಾನೇಜರ್ ನಿತಿನ್ ಶೆಣೈ, ಶಾರದಾ ಯುವಕ ವೃಂದ ಕಟ್ಟೆಮಾರು ಇಲ್ಲಿನ ಸದಸ್ಯರಾದ ಶ್ರೀಕಾಂತ್ ಶೆಣೈ, ಕೊಡುಗೈ ದಾನಿಗಳಾದ ದಿನಕರ್ ಶೆಣೈ, ಪೂಜಾ ನಾಯಕ್, ಪ್ರಶಾಂತ್ ನಾಯಕ್ ಮತ್ತು ರಾಮ್ಕೋ ಸಿಮೆಂಟ್ ಕಂಪೆನಿಯ ಡೆಪ್ಯುಟಿ ಜನರಲ್ ಮ್ಯಾನೇಜರ್ ರಾಘವೇಂದ್ರ ಪ್ರಸಾದ್, ಸೀನಿಯರ್ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ರಿಕ್ಸನ್ ಮತ್ತು ಮೊಹಮ್ಮದ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.