Home ಸುದ್ಧಿಗಳು ಪ್ರಾದೇಶಿಕ ಬೆಳ್ಮಣ್ಣು ಜೇಸಿಐ ಘಟಕಕ್ಕೆ ಪ್ರಶಸ್ತಿ

ಬೆಳ್ಮಣ್ಣು ಜೇಸಿಐ ಘಟಕಕ್ಕೆ ಪ್ರಶಸ್ತಿ

483
0

ಬೆಳ್ಮಣ್ಣು: ಭಾರತೀಯ ಜೇಸಿಐನ ವಲಯ 15ರ ಪ್ರತಿಷ್ಠಿತ ಘಟಕ 41 ವರ್ಷಗಳ ಸುಧೀರ್ಘ ಇತಿಹಾಸ ಇರುವ ಕೃಷ್ಣ ಪವಾರ್ ಸಾರಥ್ಯದ ಜೇಸಿಐ ಬೆಳ್ಮಣ್ಣು ಘಟಕಕ್ಕೆ ಮಂಗಳೂರಿನಲ್ಲಿ ಜರಗಿದ ವಲಯದ ಮಧ್ಯಂತರ ಸಮ್ಮೇಳನದಲ್ಲಿ ಅತ್ಯುತ್ತಮ ಘಟಕಾಧ್ಯಕ್ಷ ವಿನ್ನರ್ ಪ್ರಶಸ್ತಿ ಹಾಗೂ ಅತ್ಯುತ್ತಮ ಘಟಕ ರನ್ನರ್ ಪ್ರಶಸ್ತಿಯನ್ನು ವಲಯಾಧ್ಯಕ್ಷರಾದ ಸೌಜನ್ಯ ಹೆಗ್ಡೆಯವರು ನೀಡಿ ಅಭಿನಂಧಿಸಿದರು.

ನಿಕಟಪೂರ್ವ ವಲಯಾಧ್ಯಕ್ಷ ಕಾರ್ತಿಕೇಯಾ ಮಧ್ಯಸ್ಥ, ವಲಯ ಉಪಾಧ್ಯಕ್ಷ ಸತ್ಯನಾರಾಯಣ ಭಟ್, ಬೆಳ್ಮಣ್ಣು ಜೇಸಿಐ ಘಟಕದ ಪೂರ್ವಾಧ್ಯಕ್ಷ ಸತೀಶ್ ಕೋಟ್ಯಾನ್, ಜೇಸಿರೇಟ್ ವಿಭಾಗದ ಅಧ್ಯಕ್ಷೆ ಮಾಯಾ ಸಿ. ರಾವ್, ಸದಸ್ಯರಾದ ಸಂದೀಪ್ ಕುಮಾರ್, ಚಿನ್ಮಯಿ ಪವಾರ್ ಮೊದಲಾದವರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.