Home ಸುದ್ಧಿಗಳು ಪ್ರಾದೇಶಿಕ ಶ್ರೀ ದೇವಕಿಕೃಷ್ಣ ರವಳನಾಥ ದೇವಳದಲ್ಲಿ ಚಂಡಿಕಾಯಾಗ

ಶ್ರೀ ದೇವಕಿಕೃಷ್ಣ ರವಳನಾಥ ದೇವಳದಲ್ಲಿ ಚಂಡಿಕಾಯಾಗ

840
0

ಕಾರ್ಕಳ: ಶ್ರೀ ದೇವಕಿಕೃಷ್ಣ ರವಳನಾಥ ದೇವಳದಲ್ಲಿ ವೇ.ಮೂ.ಸಂದೀಪ್ ಭಟ್ ಮಾರ್ಗದರ್ಶನದಲ್ಲಿ ದೇವರ ಸನ್ನಿಧಿಯಲ್ಲಿ ಚಂಡಿಕಾಯಾಗ ನೆಡೆಯಿತು.

ಸಾಮೂಹಿಕ ಪ್ರಾರ್ಥನೆ, ಗುರು ಗಣಪತಿ ಪೂಜೆ, ಪಂಚಾಮೃತಾ ಅಭಿಷೇಕ, ಸಾನಿಧ್ಯ ಹವನ, ದ್ವಾದಶ ಕಲಶಾಭಿಷೇಕ ನಡೆಯಿತು. ಹೋಮ ಪೂಜಾ ಕಾರ್ಯದಲ್ಲಿ ನಾರಾಯಣ ಕಾಮತ್ ದಂಪತಿ ಕಂಭದಕೋಣೆ ಸಹಕರಿಸಿದರು. ಪೂರ್ಣಾಹುತಿಯ ಬಳಿಕ ಕುಮಾರಿ ಪೂಜೆ, ಸುಹಾಸಿನಿ ಪೂಜೆ, ಮಹಾಪೂಜೆಯ ಬಳಿಕ ಸಮಾರಾಧನೆ ಜರಗಿತು.

ದೇವಳದ ಆಡಳಿತ ಮೊಕ್ತೇಸರ ಸುಧಾಕರ್ ಪ್ರಭು, ಖಂಚಾಚಿ ಗಣೇಶ್ ಕಾಮತ್, ಕಾರ್ಯದರ್ಶಿ ವಸಂತ್ ಪ್ರಭು, ರಾಮರಾಯ ಪ್ರಭು, ದೇವದಾಸ್ ಕಾಮತ್ ಉಡುಪಿ, ವಿನೋದ್ ಪ್ರಭು, ಜಿ.ಎಸ್.ಬಿ ಯುವಕ ಮಂಡಳಿ ಸದಸ್ಯರು, ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.