Home ಸುದ್ಧಿಗಳು ಕ್ರೈಂ ಇರಿತಕ್ಕೊಳಗಾದ ಯುವತಿ ಸಾವು

ಇರಿತಕ್ಕೊಳಗಾದ ಯುವತಿ ಸಾವು

1019
0

ಉಡುಪಿ: ಸೋಮವಾರ ಸಂಜೆ ಉಡುಪಿ ಸಂತೆಕಟ್ಟೆ ರಾಷ್ಟ್ರ‍ೀಯ ಹೆದ್ದಾರಿ ಆಶೀರ್ವಾದ ಥಿಯೇಟರ್ ಬಳಿಯ ಪೆಟ್ರ‍ೋಲ್ ಪಂಪ್ ಹತ್ತಿರ ಇರಿತಕ್ಕೊಳಗಾದ ಅಂಬಾಗಿಲು ನಿವಾಸಿ ಸೌಮ್ಯಶ್ರೀ (28) ಮೃತಪಟ್ಟಿದ್ದು ಆಕೆಯನ್ನು ಕೊಲೆ ಮಾಡಿದವ ಅಲೆವೂರು ರಾಮ್ಪುರ ನಿವಾಸಿ ಸಂದೇಶ್ ಕುಲಾಲ್(28) ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ, ಸಂತೆಕಟ್ಟೆಯ ರಾಷ್ಟ್ರ‍ೀಕೃತ ಬ್ಯಾಂಕ್ ಒಂದರಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸಕ್ಕೆ ಇದ್ದ ಸೌಮ್ಯಶ್ರೀ ಹಾಗೂ ಬೇರೊಂದು ಉದ್ಯೋಗದಲ್ಲಿದ್ದ ಸಂದೇಶ್ ಕುಲಾಲ್ ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಸೌಮ್ಯಶ್ರೀಯವರಿಗೆ ಕೆಲವು ದಿನಗಳ ಹಿಂದೆಯಷ್ಟೇ ಬೇರೊಬ್ಬರ ಜೊತೆಗೆ ನಿಶ್ಚಿತಾರ್ಥವಾಗಿತ್ತು. ಇದರಿಂದ ಕುಪಿತಗೊಂಡಿದ್ದ ಸಂದೇಶ ಸೋಮವಾರ ಸಂಜೆ ಸೌಮ್ಯಶ್ರೀ ಕೆಲಸ ಮುಗಿಸಿ ಮನೆಗೆ ಹೋಗುವುದನ್ನು ಹೊಂಚು ಹಾಕಿ ಕುಳಿತಿದ್ದು ಆಕೆಯನ್ನು ಹಿಂಬಾಲಿಸಿಕೊಂಡು ಆಶೀರ್ವಾದ ಪೆಟ್ರೋಲ್ ಪಂಪ್ ಬಳಿ ಆಕೆಯ ವಾಹನವನ್ನು ಅಡ್ಡಗಟ್ಟಿ ಮನಬಂದಂತೆ ಸೌಮ್ಯಶ್ರೀಗೆ ಇರಿದು ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ.

ಇಬ್ಬರೂ ರಕ್ತದ ಮಡುವಿನಲ್ಲಿ ಬಿದ್ದಿದ್ದು ಸ್ಥಳೀಯರು ತಕ್ಷಣ ಇಬ್ಬರನ್ನೂ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಸೌಮ್ಯಶ್ರೀ ವಿಪರೀತ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾರೆ. ಸೌಮ್ಯಶ್ರೀಯನ್ನು ಕೊಲೆಮಾಡಿದ ಸಂದೇಶ್ ಕುಲಾಲ್ ಸ್ಥಿತಿ ಗಂಭೀರವಾಗಿದೆ. ಉಡುಪಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.