ಭರವಸೆಯೇ ಬದುಕು ಎಂಬ ಮಾತಿದೆ. ಒಬ್ಬ ವ್ಯಕ್ತಿಯ ಬದುಕಿನಲ್ಲಿ ನಾಳಿನ ಸುಂದರ ದಿನಗಳಿಗಾಗಿ, ಕನಸು, ತುಡಿತ ಸಹಜ. ಅದು ದಕ್ಕುತ್ತದೆ ಎಂಬ ಭರವಸೆಯೇ ಬದುಕಿಗೊಂದು ಕಾರಣವಾಗಿರುತ್ತದೆ. ಇದು ಒಬ್ಬ ವ್ಯಕ್ತಿಯ ಜೀವನದ ಶೈಲಿ. ಅದುವೇ ಅವನ ಪುಟ್ಟ ಪ್ರಪಂಚವೂ ಕೂಡ. ಇನ್ನೊಂದು ಆಯಾಮದಲ್ಲಿ ಹೇಳುವುದಾದರೆ ಅದೊಂದು ಸ್ವಾರ್ಥವೂ ಹೌದು. ನಾನು, ನನ್ನ ಕುಟುಂಬ, ನನ್ನ ಬದುಕು ಇಷ್ಟೇ ಆಗಿರುತ್ತದೆ. ಇದೆಲ್ಲವನ್ನೂ ಮೀರಿ ಭಾರತಾಂಬೆಯ ಸುಂದರ ಭವಿಷ್ಯದ ಭರವಸೆಗೆ ಕಾರಣರಾಗಿರುವವರು ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರು.
ನರೇಂದ್ರ ಮೋದಿ ಅವರು ದೇಶವನ್ನು ಮುನ್ನಡೆಸುವ ಪಣ ತೊಟ್ಟು, ದೇಶವೇ ನನ್ನ ಉಸಿರು ಅನ್ನುವ ರೀತಿಯಲ್ಲಿ ತನ್ನ ಕಾರ್ಯವನ್ನು ಯಾವುದೇ ಸ್ವಾರ್ಥವಿಲ್ಲದೇ ನಿಭಾಯಿಸುತ್ತಿದ್ದಾರೆ. ಇಂತಹ ಮಹಾನ್ ನಾಯಕನನ್ನು ಪಡೆದ ನಾವೆಲ್ಲರೂ ಧನ್ಯರು. ಬಂದಂತಹ ಅನೇಕ ಸವಾಲುಗಳನ್ನು ಎದುರಿಸಿ, ಭಾರತಾಂಬೆ ಅಷ್ಟೇ ದೃಢವಾಗಿ ನಿಲ್ಲಲು ನರೇಂದ್ರ ಮೋದಿ ಅವರ ಪಾತ್ರ ಬಹಳ ದೊಡ್ಡದು. ಇಂದು ವಿಶ್ವವೇ ಅವರ ನಡೆಯನ್ನು ಕೊಂಡಾಡುತ್ತಿದೆ. ಇಂತಹ ಪ್ರಧಾನಿ ನನ್ನ ಹೆಮ್ಮೆ. ಹೆಮ್ಮೆಯ ಪ್ರಧಾನಿಯ ಜನ್ಮ ದಿನದ ಸಂದರ್ಭದಲ್ಲಿ, ಈ ಮೂಲಕ ಶ್ರೀ ದೇವರು ಅವರನ್ನು ಆಯುರಾರೋಗ್ಯ ಭಾಗ್ಯ ನೀಡಿ, ಇನ್ನೂ ಉತ್ತಮ ಕಾರ್ಯಗಳನ್ನು ಕೈಗೊಳ್ಳಲು ಹರಸಲಿ ಎಂದು ಪ್ರಾರ್ಥಿಸುತ್ತೇನೆ. ಜನ್ಮ ದಿನದ ಹಾರ್ದಿಕ ಶುಭಾಶಯಗಳು ಮೋದಿಜೀ.
ಶುಭಶ್ರೀ ಶ್ರೀಧರ ಆಚಾರ್ಯ
ಆಂಗ್ಲ ಭಾಷಾ ಉಪನ್ಯಾಸಕಿ,
ಎಲ್.ಎಸ್.ಬಿ.ಜಿ.ಎಫ್.ಜಿ.ಸಿ ಕಾಲೇಜು ಕೋಟ ಪಡುಕೆರೆ.