ಬೆಂಗಳೂರು, ಏ.21: ಮೋದಿಯವರ ಬಳಿ ಇರುವುದು ಖಾಲಿ ಚೊಂಬೇ ಹೊರತು ಅಕ್ಷಯ ಪಾತ್ರೆಯಲ್ಲ ಎಂದು ಕಂದಾಯ ಸಚಿವರಾದ ಕೃಷ್ಣಭೈರೇಗೌಡ ಹೇಳಿದರು. ಭಾನುವಾರ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ಮೋದಿಯವರದ್ದು ಅಕ್ಷಯ ಪಾತ್ರೆ ಎಂದಾದರೆ, ಅದರಿಂದ ನಮ್ಮ ರೈತರಿಗೆ ಬರ ಪರಿಹಾರವನ್ನು, ರಾಜ್ಯದ ವಿವಿಧ ನೀರಾವರಿ ಯೋಜನೆಗಳಿಗೆ ಬರಬೇಕಾದ ಅನುದಾನವನ್ನು ದೇವೇಗೌಡ ಅವರು ಪ್ರಧಾನಿಗಳಿಗೆ ಹೇಳಿ ಕೊಡಿಸಲಿ ಎಂದು ಹೇಳಿದರು. ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷರಾದ ರಮೇಶ್ ಬಾಬು ಉಪಸ್ಥಿತರಿದ್ದರು.