Home ಸುದ್ಧಿಗಳು ಪ್ರಾದೇಶಿಕ ವಿಕಲಚೇತನರಿಗೆ ಶೀಘ್ರವಾಗಿ ಸ್ಕೂಟರುಗಳನ್ನು ವಿತರಣೆ ಮಾಡಿ: ನಾಗರಿಕ ಸಮಿತಿ ಆಗ್ರಹ

ವಿಕಲಚೇತನರಿಗೆ ಶೀಘ್ರವಾಗಿ ಸ್ಕೂಟರುಗಳನ್ನು ವಿತರಣೆ ಮಾಡಿ: ನಾಗರಿಕ ಸಮಿತಿ ಆಗ್ರಹ

365
0

ಉಡುಪಿ: ಜಿಲ್ಲೆಯ ವಿಕಲಚೇತನರಿಗೆ ವಿತರಿಸಲು ತಂದಿರುವ, ಹೊಸದಾದ 34 ಚರ್ತುಚಕ್ರ ಸ್ಕೂಟರುಗಳು ಕಳೆದ ಒಂದು ತಿಂಗಳುಗಳಿಂದ ಬೈಲೂರು ಆಶಾನಿಲಯದ ವಠಾರದಲ್ಲಿ ಅನಾಥವಾಗಿರುವುದು ಕಂಡುಬಂದಿದೆ. ಈ ಬಗ್ಗೆ ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ತಕ್ಷಣ ಸ್ಕೂಟರುಗಳನ್ನು ಫಲಾನುಭವಿಗಳಿಗೆ ವಿತರಿಸುವಂತೆ ಆಗ್ರಹಪಡಿಸಿದ್ದಾರೆ.

ಕೆಲವು ಸ್ಕೂಟರುಗಳನ್ನು ಮಳೆ ಬೀಳುವ ಸ್ಥಳದಲ್ಲಿ ಸಾಲಾಗಿ ನಿಲುಗಡೆ ಮಾಡಲಾಗಿದೆ. ಅವುಗಳಿಗೆ ಜಂಗು ಹಿಡಿಯಲಾರಂಬಿಸಿದೆ. ಹಾಗೂ ಕೆಲವು ಸ್ಕೂಟರುಗಳನ್ನು ತಗಡು ಚಪ್ಪರದ ಅಡಿಯಲ್ಲಿ ನಿಲುಗಡೆ ಮಾಡಲಾಗಿದೆ. ಇವುಗಳಿಗೆ ಧೂಳು ಹಿಡಿದು, ಜೇಡರಬಲೆಗಳು ಕಟ್ಟಿರುವುದು ಕಂಡುಬಂದಿದೆ. ಆಸನಗಳಿಗೆ ಫಂಗಸ್ ಹಿಡಿದಿದ್ದು, ಪಕ್ಷಿಗಳು ಹಿಕ್ಕೆ ಹಾಕಿವೆ. ಇಲ್ಲಿರುವ ಹೊಸ ಸ್ಕೂಟರುಗಳು ಹೊಸತನ ಕಳೆದುಕೊಂಡು, ಅದೆಷ್ಟೋ ಕಿ.ಮೀ ಸಂಚರಿಸುವ ಸ್ಕೂಟರುಗಳಂತೆ ಕಂಡುಬರುತ್ತಿದೆ ಎಂದು ಸ್ಕೂಟರುಗಳಿಗಾಗಿರುವ ದುಸ್ಥಿತಿಯ ಬಗ್ಗೆ ನಾಗರಿಕ ಸಮಿತಿಯ ಕಾರ್ಯಕರ್ತರು ಹೇಳಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.