ಉಡುಪಿ, ಮಾ.30: ಯಕ್ಷಗಾನ ಕಲಾರಂಗ (ರಿ.) ಉಡುಪಿ ಇದರ ವತಿಯಿಂದ ವಿದ್ಯಾಪೋಷಕ್ ವಿದ್ಯಾರ್ಥಿನಿ ಯಜ್ಞ ಇವರಿಗೆ ಯಕ್ಷಗಾನ ಕಲಾರಂಗ ಅಧ್ಯಕ್ಷರು ಹಾಗೂ ನಂದಕುಮಾರ್ ಅಸೋಸಿಯೇಷನ್ ವರಿಷ್ಠರಾದ ಎಂ. ಗಂಗಾಧರ್ ರಾವ್ ಅವರ ಪ್ರಾಯೋಜಕತ್ವದಲ್ಲಿ ಉಡುಪಿ ತಾಲೂಕಿನ ಉದ್ಯಾವರದಲ್ಲಿ ನಿರ್ಮಿಸಿರುವ ಮನೆ ‘ನಂದಾದೀಪ’ ಉದ್ಘಾಟನಾ ಸಮಾರಂಭ ನಡೆಯಿತು.
ಸೋದೆ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು. ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ನಿವೃತ್ತ ಬ್ಯಾಂಕ್ ಅಧಿಕಾರಿಗಳಾದ ಟಿ. ಶ್ರೀಧರ ರಾವ್, ವಿಜಯಾ ಇಂಡಸ್ಟ್ರೀಸ್ ಮಾಲಕರಾದ ಕೆ. ಸತ್ಯೇಂದ್ರ ಪೈ, ಎ.ಸಿ.ಸಿ.ಇ.ಎ ಉಡುಪಿ ಅಧ್ಯಕ್ಷರಾದ ಯೋಗೀಶ್ ಚಂದ್ರಾಧರ್, ನ್ಯಾಯವಾದಿಗಳಾದ ಎಂ. ಗೋಪಿಕೃಷ್ಣ ರಾವ್, ಯಕ್ಷಗಾನ ಕಲಾರಂಗ (ರಿ.) ಉಡುಪಿ ಕಾರ್ಯದರ್ಶಿಗಳಾದ ಮುರಲಿ ಕಡೆಕಾರ್ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಮುಂತಾದವರು ಉಪಸ್ಥಿತರಿದ್ದರು.




By
ForthFocus™